ಬೆಳಿಗ್ಗೆ 12 ಗಂಟೆಗೆ ಸುಮಾರಿಗೆ ಕೆರೆ ಅಂಗಳದಲ್ಲಿ ಕಾಣಿಸಿಕೊಂಡಿರುವ ಬೆಂಕಿ ವ್ಯಾಪಿಸುತ್ತಲೇ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದೆ ಸುಮಾರು ಒಂದೂವರೆ ಗಂಟೆಗಳ ಹುರಿಯಿತು. ಇಂದು ಪೂರ್ವ ದಿಕ್ಕಿನಿಂದ ಬೀಸುತ್ತಿದ್ದ ಸುಳಿಗಾಳಿಯಿಂದಾಗಿ ಬೆಂಕಿ ನಿಯಂತ್ರಣಕ್ಕೆ ತರಲು ಗಂಟೆಗಟ್ಟಲೆ ಸಾಹಸ ಪಡುವಂತಾಗಿತ್ತು. ಬೆಂಕಿ ನಿಯಂತ್ರಣಕ್ಕೆ ಬಂದಿದ್ದರಿಂದ ಕೆರೆ ಅಂಚಿನ ಅರಳುಮಲ್ಲಿಗೆ, ಜಕ್ಜಸಂದ್ರ ಗ್ರಾಮಗಳ ರೈತರ ತೋಟದ ಮನೆಗಳಿಗೂ ವ್ಯಾಪಿಸುವ ಅಪಾಯ ತಪ್ಪಿದೆ.