ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಜಾರಿಯಾದರೂ ತೆರವುಗೊಳ್ಳದ ಜಾಹೀರಾತು ಬ್ಯಾನರ್

ನೀತಿ ಸಂಹಿತೆ ಜಾರಿಯಾದರೂ
Last Updated 31 ಮಾರ್ಚ್ 2023, 7:11 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಿ ಎರಡು ದಿನ ಕಳೆದರೂ ಪಟ್ಟಣದ ಸಂತೆ ಮೈದಾನದ ಎದುರು ಸರ್ಕಾರಿ ಯೋಜನೆಯ ಜಾಹೀರಾತು ಫಲಕ ತೆರವುಗೊಳಿಸಿಲ್ಲ.

ಚುನಾವಣಾ ಆಯೋಗದಿಂದ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲೇ ಪಟ್ಟಣದಲ್ಲಿನ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು
ತೆರವುಗೊಳಿಸಿದ, ಪುರಸಭೆಯ ಅಧಿಕಾರಿಗಳು, ನೀತಿ ಸಂಹಿತೆ ಜಾರಿಯಾದ ಕೂಡಾ ಸರ್ಕಾರದ ಜಾಹೀರಾತು ಇರುವ ಬ್ಯಾನರ್ ತೆರವುಗೊಳಸದೆ ನಿರ್ಲಕ್ಷ್ಯವಹಿಸಿದ್ದಾರೆ.ಈ ಮೂಲಕ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸಮೂರ್ತಿ ದೂರಿದ್ದಾರೆ.

ಈ ಕೂಡಲೆ ಜಾಹೀರಾತು ತೆರವುಗೊಳಿಸುವ ಮೂಲಕ ನೀತಿ ಸಂಹಿತೆಯನ್ನು ಪಾಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT