ಸುಮಾರು 200ಕ್ಕೂ ಹೆಚ್ಚು ಜನ ಬಿಬಿಎಂಪಿ ಮಾರ್ಷಲ್ಗಳು ಮತ್ತು ಪೊಲೀಸರನ್ನು ಧರಣಿ ಸ್ಥಳಕ್ಕೆ ಕರೆತರಲಾಗಿತ್ತು. ಪ್ರತಿರೋಧ ಒಡ್ಡಿದ ಧರಣಿನಿರತರತ್ತ ಪೊಲೀಸರು ಬೀಸಿದ ಲಾಠಿಯಿಂದ ತಣ್ಣೀರನಹಳ್ಳಿ ಗ್ರಾಮದ ರೈತ ಸುರೇಶ್ ಹಲ್ಲುಗಳು ಮುರಿದಿವೆ. ಕೊರಟಗೆರೆ ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಬಾಷಾ ಅವರ ಸೊಂಟಕ್ಕೆ ಪೆಟ್ಟಾಗಿದೆ.