ಶಿಕ್ಷಣ ಫೌಂಡೇಶನ್ ಸಹ ಸಂಚಾಲಕ ಕುಮಾರನಾಯ್ಕ ಮಾತನಾಡಿ, ಪರಿಸರ ನಾಶದಿಂದ ಅಪರೂಪದ ಪ್ರಾಣಿ, ಪಕ್ಷಿ ಪ್ರಬೇಧಗಳು ನಾಶವಾಗುತ್ತಿವೆ. ಪರಿಣಾಮ ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಾಣಿ, ಪಕ್ಷಿಗಳು ಬದುಕಲು ಅಗತ್ಯ ಇರುವ ಪರಿಸರ ನಿರ್ಮಾಣ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಪರಿಸರ ಶಿಕ್ಷಣ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ ಎಂದರು.