ಭಾರತ್ ರಕ್ಷ ಪ್ರತಿಷ್ಠಾನದ ಅಧ್ಯಕ್ಷ ಮೇಜರ್ ಎನ್. ರಘುರಾಮರೆಡ್ಡಿ ಮಾತನಾಡಿ, ಒಂದು ದೇಶದ ಸಂಸ್ಕೃತಿಯು ಕಲೆಗಳಿಂದ ಅಭಿವ್ಯಕ್ತಗೊಳ್ಳುತ್ತದೆ. ಮಾತಿನಿಂದ ಹೇಳಲಾಗದ್ದನ್ನು ಕಲೆಯ ಮೂಲಕ ಸ್ಪಷ್ಟವಾಗಿ ಹೇಳಬಹುದಾಗಿದೆ. ಹಾಗಾಗಿ, ಕಲೆಯನ್ನು ಪ್ರತಿಯೊಬ್ಬರು ಆರಾಧಿಸಬೇಕು. ಭರತ ನಾಟ್ಯದಂತಹ ಕಲೆಗಳು ಸಮಾಜದ ಜೀವಂತಿಕೆಗೆ ಸಾಕ್ಷಿಯಾಗಿವೆ ಎಂದರು.