‘ಬಾಬಾಬುಡನ್ಗಿರಿಯು ಬಹು ಸಂಸ್ಕೃತಿಯ ವೈವಿಧ್ಯದ ರೂಪಕ. ಆ ವೈವಿಧ್ಯ ಉಳಿಯಲೇಬೇಕು ಎಂದು ಹೋರಾಟ ಮಾಡಿದ್ದೆವು. 15 ವರ್ಷಗಳ ಹೋರಾಟ ಈಗ ತಾರ್ಕಿಕ ಅಂತ್ಯ ಕಂಡಿದೆ. ಅವೈದಿಕ ಪಂಥಗಳ (ನಾಥ, ದತ್ತ, ಸೂಫಿ ಪಂಥ) ಆಚರಣೆಗಳು ಅಲ್ಲಿ ಮುಂದುವರಿಯಬೇಕು ಎಂಬುದು ಐತಿಹಾಸಿಕ ಹೆಜ್ಜೆ’ ಎಂದು ಅವರು ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.ಸೌಹಾರ್ದ ಪರಂಪರೆಗೆ ಸಂದ ಗೆಲುವು: ವರದಿಯನ್ನು ಒಪ್ಪಿಕೊಂಡಿರುವುದು ಸೌಹಾರ್ದ ಪರಂಪರೆಗೆ ಸಂದ ಗೆಲುವು ಎಂದು ಸಿಪಿಐ ಮುಖಂಡ ಬಿ.ಅಮ್ಜದ್ ಹೇಳಿದರು.