ಜಿ.ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಆರಂಭಿಸಿರುವ ಕಂದಾಯ ಸಚಿವರು, ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಅಹವಾಲು ಆಲಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಸ್ಮಶಾನ ಒತ್ತುವರಿ ಆಗಿರುವ ವಿಷಯ ಗಮನಕ್ಕೆ ತಂದರು. 3 ಎಕರೆ ವಿಸ್ತೀರ್ಣ ಇದ್ದ ಸ್ಮಶಾನ ಈಗ 1 ಎಕರೆಯಷ್ಟೇ ಉಳಿದಿದೆ. ಸ್ಮಶಾನದ ಒಳಕ್ಕೆ ಮೃತದೇಹವನ್ನು ಕೊಂಡೊಯ್ಯುವುದಕ್ಕೂ ಅಸಾಧ್ಯವಾದ ಪರಿಸ್ಥಿತಿ ಇದೆ ಎಂದರು.