ಪ್ರಯಾಣಿಕರಾದ ವಿಮಲ ಅವರ ಪ್ರಕಾರ, ‘ಎಲ್ಲರೂ ಕಾರು, ಜೀಪು ಮತ್ತು ದ್ವಿಚಕ್ರವಾಹನ ಹೊಂದಿರುವುದಿಲ್ಲ, ಆಸ್ಪತ್ರೆಗೆ ಹೋಗಬೇಕು, ಅನಿವಾರ್ಯವಾಗಿ ಹೊಗಲೇಬೇಕಾದ ಕಾರ್ಯಕ್ರಮಗಳಿಗೆ ತೆರಳಬೇಕು. ಎರಡು ದಿನ ಬಸ್ ಸಂಚಾರವಿಲ್ಲದಿದ್ದರೆ ಪ್ರಯಾಣಿಕರಿಗೆ ಎಷ್ಟು ಅನಾನುಕೂಲ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.