‘ಕ್ಷೇತ್ರದಲ್ಲಿನ ಉಪಚುನಾವಣೆ ನಿಮಿತ್ತ ಅಧಿಕ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆ ಬಗ್ಗೆ ಮತದಾರರಿಗೆ ತಿಳಿಯುವಂತೆ ಫಲಕಗಳನ್ನು ಹಾಕಲಾಗಿದೆ. ನಿರ್ಭೀತಿಯಿಂದ, ಪಾರದರ್ಶಕವಾಗಿ ಮತಚಲಾಯಿಸಲು ಹೆಚ್ಚು ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದನ್ನು ವಿವಿಧ ಚೆಕ್ ಪೋಸ್ಟ್ಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಮತದಾರರಲ್ಲದ ವ್ಯಕ್ತಿಗಳನ್ನು ಬೂತ್ ಏಜೆಂಟ್ಗಳನ್ನಾಗಿ ನೇಮಿಸುವಂತಿಲ್ಲ ಎಂದು ಉಮೇದುವಾರರಿಗೆ ತಿಳಿಸಲಾಗಿದೆ’ ಎಂದರು.