ಸಂಸದ ಡಿ.ಕೆ.ಸುರೇಶ್ ಈಗಾಗಲೇ ತಮ್ಮ ವ್ಯಾಪ್ತಿಯ ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಂಚುವ ಕಾರ್ಯಕ್ರಮ ರೂಪಿಸಿದ್ದಾರೆ. ಅದರಂತೆ ಈ ರೈತ ದಂಪತಿ ಬೆಳೆಯನ್ನು ಖರೀದಿಸಲು ಖುದ್ದು ತೆರಳಿದಾಗ, ಸಂಸದರ ರೈತಪರ ಕಾಳಜಿ ಮೆಚ್ಚಿ ಉಚಿತವಾಗಿ ನೀಡುವ ಮೂಲಕ ತಮ್ಮ ಉದಾರತೆ ಮೆರೆದಿದ್ದಾರೆ ಎಂದು ಸಂಸದರ ಆಪ್ತ ಮೂಲಗಳು ಹೇಳಿವೆ.