ಹೊಸಕೋಟೆ: ನಗರದಲ್ಲಿ ಶನಿವಾರ ಶಾಸಕರ ಬೆಂಬಲಿಗರ ಮೇಲೆ ನಡೆದ ಲಾಠಿ ಪ್ರಹಾರ ಹಾಗೂ ರಸ್ತೆ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್ ಬಚ್ಚೇಗೌಡ ವಿರುದ್ಧ ದೂರು ದಾಖಲಾಗಿದೆ.
ಅವರ 15 ಜನರ ಬೆಂಬಲಿಗರ ಮೇಲೂ ಮೊಕದ್ದಮೆ ದಾಖಲು ಆಗಿದೆ. ಶಾಸಕರ ಬೆಂಬಲಿಗರು ಸಚಿವ ಎಂಟಿಬಿ ನಾಗರಾಜ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.