‘ರಾಮಾಯಣ ಮತ್ತು ಮಹಾಭಾರತ ಹಿಂದೂ ಧರ್ಮದ ಮಹಾಕಾವ್ಯಗಳು. ಅಂದಿನ ಕಾಲಘಟ್ಟದಲ್ಲಿ ನಡೆದ ಘಟನೆಗಳೇ ಕಾವ್ಯದ ಸಾರ. ಕೃಷ್ಣನ ಬಾಲ ಲೀಲೆಗಳು, ತುಂಟಾಟ, ಗೋಪಿಕಾ ಸ್ತ್ರಿಯರೊಂದಿಗೆ ಇದ್ದ ಒಡನಾಟ, ಬಾಲ್ಯದಲ್ಲಿ ಅನೇಕ ಅಸುರರನ್ನು ಕೊಂದು ಹಾಕಿದ್ದು ಪುರಾಣದಿಂದ ತಿಳಿಯುತ್ತವೆ. ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷಭೂಷಣ, ಐತಿಹಾಸಿಕ ರಾಜರ, ನಾಯಕರ, ರಾಷ್ಟ್ರೀಯ ನಾಯಕರ ವೇಷಭೂಷಣ ತೊಡಿಸುವುದು ಮಕ್ಕಳಲ್ಲಿ ಸ್ಫೂರ್ತಿ, ಆದರ್ಶ ಹಾಗೂ ಉತ್ತಮ ವ್ಯಕ್ತಿತ್ವಕ್ಕೆ ಪ್ರೇರಣೆಯಾಗುತ್ತದೆ’ ಎಂದು ಹೇಳಿದರು.