ಪುರಾಣ ಹಿನ್ನಲೆ: ದೇವಾಂಗ ಮೂಲ ಪುರುಷ ದೇವಲ ಮಹರ್ಷಿಯ ಕಾಯಕ ನಿಷ್ಠೆಯನ್ನು ಮೆಚ್ಚಿದ ಶಿವ ಕೈಲಾಸದಲ್ಲಿ ವರವನ್ನು ಕೇಳಿದಾಗ ಭೂಲೋಕಕ್ಕೆ ರಾಮಲಿಂಗ ಚೌಡೇಶ್ವರಿಯನ್ನು ಕಳಿಸಿಕೊಡುವಂತೆ ಕೇಳುತ್ತಾರೆ. ಅಂತೆಯೇ ದೇವಿಯನ್ನು ಕರೆತರುವಾಗ ಹಲವಾರು ವಿಘ್ನಗಳು ಎದುರಾಗಿ ಕೊನೆಗೆ ಭೂಲೋಕದಲ್ಲಿ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಖತ್ತಿ ಹಬ್ಬ, ಅಲಗು ಸೇವೆ, ದಂಡಕಗಳು ಮೊದಲಾದ ಆಚರಣೆಗಳು ಬೆಳೆದು ಬಂದಿವೆ. ನಿಷ್ಠೆಯಿಂದ, ಶ್ರದ್ದಾ ಭಕ್ತಿಗಳಿಂದ ಈ ಆಚರಣೆ ನೆರವೇರಿಸಲಾಗುತ್ತಿದೆ ಎನ್ನುತ್ತಾರೆ ಹಿರಿಯರು.