ಸಂಸ್ಥೆಯ ಅಧ್ಯಕ್ಷ ಆರ್.ಸಿ.ಮಂಜುನಾಥ್ ಮಾತನಾಡಿ, ’ಸಂಸ್ಥೆಯಲ್ಲಿ 10 ಶಾಲಾ ವಾಹನಗಳಿವೆ. 2 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇಂದು ಶಾಲಾ, ಕಾಲೇಜಿಗೆ ರಜೆ ನೀಡಿದ್ದೇವೆ. ನಾಳೆ ಪರೀಕ್ಷೆ ಇರುವ ಕಾರಣ ಕೆಲ ಮಕ್ಕಳು ಮಾತ್ರ ಬಂದು ತರಬೇತಿ ಪಡೆಯುತ್ತಿದ್ದಾರೆ. ನಾವು ಕಾಲೇಜು ನಡೆಸುತ್ತಿಲ್ಲ. ನಾವು ಸೋಮವಾರವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಇಂದು ರಜೆ ಘೋಷಿಸಿದ್ದೇವೆ‘ ಎಂದರು.
ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಮನೆಗಳಿಗೆ ವಾಪಸ್ ಕಳುಹಿಸಲಾಯಿತು. ಎನ್.ಎಸ್.ಐ.ಯು ಸಂಘಟನೆಯ ಮುಖಂಡರಾದ ವಿನಯ್ ಕುಮಾರ್, ಮಂಜುನಾಥ್ ಇದ್ದರು.