ಈ ದೇಶದ ಬಡವರು, ತುಳಿಕ್ಕೆ ಒಳಗಾಗಿರುವವರು, ಆರ್ಥಿಕ ದುರ್ಬಲರ ಏಳಿಗೆಗಾಗಿ ಹುಟ್ಟಿಕೊಂಡ ಏಕೈಕ ಪಕ್ಷ ಬಹುಜನ ಸಮಾಜವಾದಿ ಪಕ್ಷ. ಮಾಯಾವತಿ ಅವರು ಪ್ರಧಾನಿಯಾಗುವ ಅವಕಾಶ ಹೊಂದಿದ್ದಾರೆ. ಅವರು ಪ್ರಧಾನಿಯಾದರೆ ದೇಶಕ್ಕೆ ಒಳ್ಳೆಯ ದಿನಗಳು ಬರಲು ಸಾಧ್ಯವಿದೆಯೇ ಹೊರತು, ಕಾಂಗ್ರೆಸ್, ಬಿಜೆಪಿಯಿಂದ ಅದು ಸಾಧ್ಯವಿಲ್ಲ. ಈ ಭಾಗದಲ್ಲಿನ ಸಮಸ್ಯೆಗಳ ಕುರಿತು ಧ್ವನಿಯೆತ್ತಲು ಚಿಂತಕ, ವಕೀಲ ದ್ವಾರಕಾನಾಥ್ ಅವರಿಗೆ ಮತ ನೀಡಲು ಮನವಿ ಮಾಡಿದರು.