ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ನಾಗರಬಾವಿಯ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಹೇಳಿದ್ದು ನಿಜ. ಕಾರಣಾಂತರಗಳಿಂದ ಅನುದಾನ ಬೇರೆ ಕಡೆ ಕ್ರಿಯಾಯೋಜನೆಗೆ ಸೇರಿಸಿದ್ದು, ಪಟ್ಟಣದ ಅಭಿವೃದ್ಧಿಯ ಜೊತೆಗೆ ಜಲಮೂಲಗಳನ್ನು ಸಂರಕ್ಷಣೆ ಮಾಡಲಿಕ್ಕೆ ಬದ್ಧನಾಗಿದ್ದೇನೆ. ವಿಭಿನ್ನವಾಗಿ ಅಭಿವೃದ್ಧಿ ಪಡಿಸಲಿಕ್ಕೆ ತಯಾರಿ ಮಾಡಲಾಗುತ್ತದೆ. ಸ್ಥಳೀಯರ ಸಹಕಾರವೂ ಬೇಕಾಗಿದೆ’ ಎಂದರು.