‘ಇಲ್ಲಿನ ಬೆಂಗಳೂರು ಹೆದ್ದಾರಿಯ ಮಮತಾ ಪಟ್ರೋಲ್ ಬಂಕ್ ಸಮೀಪ 2010ರಲ್ಲಿ ನಡೆದಿದ್ದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಕಲಾಪಕ್ಕೆ ಗೈರು ಹಾಜರಾಗಿರುವ ಹಾಗೂ ನ್ಯಾಯಾಲಯದ ಆದೇಶದಂತೆ ಗಾಯಾಳು ಬಾಲಾಜಿ ಎಂಬುವವರಿಗೆ ₹67,500 ಪರಿಹಾರ ಹಾಗೂ ಇದರ ಬಡ್ಡಿ ಹಣ ₹26,325 ಗಳನ್ನು ಪಾವತಿಸದ ಕಾರಣ ಈ ಆದೇಶ ನೀಡಲಾಗಿದೆ. ನಗರದ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು ಆದೇಶ ನೀಡಿದ್ದಾರೆ’ ಎಂದು ಗಾಯಾಳು ಬಾಲಾಜಿ ಪರ ವಕೀಲ ಆನಂದ್ ಕುಮಾರ್ ತಿಳಿಸಿದರು.