ಆನೇಕಲ್ : ರಾಜ್ಯದ ಗಡಿಭಾಗ ಹೊಸೂರು ತಾಲ್ಲೂಕಿನ ಬೇಗೆನಹಳ್ಳಿಯಲ್ಲಿ ವಾಸವಾಗಿದ್ದ ಚೆನ್ನೈನಿಂದ ಬಂದಿದ್ದ 54ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ –19 ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬೇರ್ಪಡಿಸಿ ಕುಟುಂಬದ ಐದು ಜನರನ್ನು ಕ್ವಾರೆಂಟೈನ್ಗೆ ತಮಿಳುನಾಡು ಸರ್ಕಾರ ಒಳಪಡಿಸಿದೆ.
ತಮಿಳುನಾಡಿನ ಈ ಗ್ರಾಮ ಅತ್ತಿಬೆಲೆ ಸಮೀಪದ ಚಿಕ್ಕನಹಳ್ಳಿಗೆ ಹೊಂದಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆನೇಕಲ್ ತಹಶೀಲ್ದಾರ್ ಸಿ.ಮಹಾದೇವಯ್ಯ ಚಿಕ್ಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ತಮಿಳುನಾಡಿನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ.
ಸೋಂಕು ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮವನ್ನು ತಮಿಳುನಾಡು ಸರ್ಕಾರ ಸಂಪೂರ್ಣ ಸೀಲ್ಡೌನ್ ಮಾಡಿದೆ.