ಹೊಸಕೋಟೆ: ಸಿಪಿಐ(ಎಂ)ನ 4ನೇ ತಾಲ್ಲೂಕು ಸಮ್ಮೇಳನವು ನಗರದ ವೆಂಕಟಾದ್ರಿ ಪಾರ್ಟಿ ಹಾಲ್ನಲ್ಲಿ ಇದೇ 28ರಂದು ನಡೆಯಲಿದೆ ಎಂದು ತಾಲ್ಲೂಕು ಕಾರ್ಯದರ್ಶಿ ಆರ್.ಆರ್. ಮನೋಹರ್ ತಿಳಿಸಿದ್ದಾರೆ.
ತಾಲ್ಲೂಕಿನ ಸಮಗ್ರ ಅಭಿವೃದ್ಧಿ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕೆಲಸದ ಅವಕಾಶ, ಕಾರ್ಮಿಕರ ಹಕ್ಕುಗಳ ಉಳಿವು, ವಿದ್ಯುತ್ ಖಾಸಗೀಕರಣದ ವಿರುದ್ಧ ಹೋರಾಟ ಸಂಬಂಧ ಚರ್ಚಿಸಲಾಗುವುದು.
ಜಿಲ್ಲೆ ಹಾಗೂ ರಾಜ್ಯ ಮಟ್ಟದ ನಾಯಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆತಿಳಿಸಿದೆ.