ಮೇ 6ರಂದು ಒಂದೇ ದಿನದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಅಪಘಾತ, ಜಗಳ, ಕಳವು, ಆತ್ಮಹತ್ಯೆ ಸೇರಿದಂತೆ ಒಟ್ಟು 13, ಮೇ 7 ರಂದು 14 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳ ಒಂದು ದಿನ ಮೊದಲು, ನಂತರದ ದಿನದಲ್ಲಿ ಎಲ್ಲಾ ರೀತಿಯ ಅಪರಾಧ ಪ್ರಕರಣಗಳು ಹೆಚ್ಚು. ಹೀಗಾಗಿಯೇ ಈ ಎರಡು ದಿನಗಳ ಕಾಲ ರಾತ್ರಿ ಗಸ್ತುಗಳನ್ನು ಸಹಜವಾಗಿಯೇ ಹೆಚ್ಚಿಸಲಾಗಿರುತ್ತದೆ. ಇಷ್ಟಾಗಿಯೂ ಸಹ ಅಪರಾಧಗಳು ನಡೆದೇ ಹೋಗುತ್ತವೆ ಎನ್ನುತ್ತಾರೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.