ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು ನರಸೀಪುರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ (ಕರ ವಸೂಲಿಗಾರ) ಕೆ.ಶ್ರೀನಿವಾಸಾಚಾರ್ ಅವರನ್ನು ಅಮಾನತು ಮಾಡಲಾಗಿದೆ.
ಕೆ.ಶ್ರೀನಿವಾಸಾಚಾರ್ ವಿರುದ್ಧ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ದೂರು ನೀಡಿದ್ದರು. ಹಣ ದುರುಪಯೋಗ, ಅಕ್ರಮ ಹಾಗೂ ಅನಧಿಕೃತ ಖಾತೆಗಳನ್ನು ಮಾಡಿರುವ ಹಾಗೂ ನಡಾವಳಿಗಳನ್ನು ತಿದ್ದಿದ್ದಾರೆ ಎಂದು ದೂರಿ ನಲ್ಲಿ ತಿಳಿಸಲಾಗಿತ್ತು.