‘ಗ್ರಾಮೀಣ ಭಾಗದಲ್ಲೂ ಮರಗಳ ಕೊರತೆ ಹೆಚ್ಚುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ವನ ಸಂಪತ್ತು ನಾಶವಾಗುತ್ತಿದೆ. ಪ್ರಜ್ಞಾವಂತ ಸಮುದಾಯ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಗ್ರಾಮೀಣ ಪ್ರದೇಶಗಳು ಕಾಂಕ್ರಿಟ್ಮಯವಾಗುತ್ತಿವೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸದಿದ್ದರೆ ಮನುಕುಲ ಮತ್ತು ಜೀವಸಂಕುಲ ವಿನಾಶದತ್ತ ಸಾಗಲಿದೆ. ಬೆಳೆಯುತ್ತಿರುವ ಕೈಗಾರಿಕರಣ, ಹೆಚ್ಚುತ್ತಿರುವ ಭೂಮಿಯ ತಾಪಮಾನ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.