‘ತಾಲ್ಲೂಕಿನಲ್ಲಿ ಶಾಸನಗಳು, ಮಾಸ್ತಿಗಲ್ಲು, ವೀರಗಲ್ಲು ದೇವಾಲಯ, ಪಾಳು ಬಿದ್ದ ಐತಿಹಾಸಿಕ ಕಟ್ಟಡಗಳಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಅನೇಕ ಕುರುಹುಗಳು, ಶಿಲ್ಪಗಳು ಹೊರಜಗತ್ತಿಗೆ ಬೆಳಕಿಗೆ ಬಂದಿವೆ. ಅರದೇಶನಹಳ್ಳಿ ಬಳಿ ಇರುವ ರಾಷ್ಟ್ರಕೂಟರ ಶಾಸನ, ಚೋಳ ಮತ್ತು ಚಾಲುಕ್ಯರ ಕಾಲದ ಬ್ಯಾಡರಹಳ್ಳಿ ಶಾಸನ, ಕಾರಹಳ್ಳಿ ಬಳಿಯ ತುರುಗೋಳ್ ಶಾಸನ, ನಂದಿಬೆಟ್ಟ ಕ್ರಾಸ್ ಬಳಿ ಇರುವ ಕುರುವತ್ತಿ ಶಾಸನಕ್ಕಿಂತ ಬನ್ನಿಮಂಗಲ ಕೆರೆ ತೂಬಿನ ಕಲ್ಲಿನ ಮೇಲೆ ಕೆತ್ತಲಾಗಿರುವ ಶಾಸನ ವಿಶೇಷವಾಗಿದೆ’ ಎಂದು ಹೇಳಿದರು.