ರಾಮನಗರದ ರಾಮದೇವರ ಬೆಟ್ಟದ ಬಳೀಯ ಇರುಳಿಗರ ಕಾಲೋನಿ ನಿವಾಸಿ ಶಿವರಾಜ (20) ಬಂಧಿತ ಆರೋಪಿ. ಈತನಿಂದ 15 ಸಣ್ಣಸಣ್ಣ ಶ್ರೀಗಂಧದ ತುಂಡುಗಳು, ಮೂರು ದೊಡ್ಡ ತುಂಡುಗಳು, ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈತನಿಗೆ ಸಹಾಯ ಮಾಡಿದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.