ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ವೇಣುಗೋಪಾಲಸ್ವಾಮಿ ದ್ವಾರ, ಚೌಕ ವೃತ್ತ, ಹೊಸಬಸ್ ನಿಲ್ದಾಣ, ವಿಜಯಪುರ ವೃತ್ತ, ಗಿರಮ್ಮ ಸರ್ಕಲ್ಗಳಲ್ಲಿ ರ್ಯಾಲಿ ಸಾಗಿತು 'ಕಳೆದ 74ದಿನಗಳಿಂದ ರೈತರು ನಿರಂತರವಾಗಿ ಚನ್ನರಾಯಪಟ್ಟಣದ ನಾಡಕಚೇರಿಯ ಮುಂದೆ ಧರಣಿ ಮಾಡುತ್ತಿದ್ದಾರೆ. ಈವರೆಗೂ ಯಾವ ಸರ್ಕಾರದ ಸಚಿವರು ನಮ್ಮ ಸಮಸ್ಯೆ ಆಲಿಸಿಲ್ಲ, ಜೂನ್ 17ರ ನಂತರ ಹೋಬಳಿ ಕೇಂದ್ರದಿಂದ ತಾಲ್ಲೂಕು ಕೇಂದ್ರಕ್ಕೆ ಧರಣಿಯೂ ವರ್ಗಾವಣೆಗೊಂಡು, ಹೋರಾಟ ಮತ್ತಷ್ಟು ತೀವ್ರವಾಗುತ್ತದೆ' ಎಂದು ರೈತರು ತಿಳಿಸಿದರು.