<p><strong>ವಿಜಯಪುರ(ದೇವನಹಳ್ಳಿ):</strong> ಪಟ್ಟಣದಿಂದ ಕಳೆದ ಎರಡು ವರ್ಷಗಳ ಹಿಂದೆ ನೆರೆಯ ತಾಲ್ಲೂಕುಗಳ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು ಆರಂಭವಾಗಿದ್ದ ಬಿಎಂಟಿಸಿ ಬಸ್ ಸೇವೆ ಕಾಲ ಕ್ರಮೇಣ ಕ್ಷಿಣಿಸುತ್ತಿದ್ದ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ರದ್ದಾಗಿದೆ.</p>.<p>ವಿಜಯಪುರ ಪಟ್ಟಣದಿಂದ ಚನ್ನರಾಯಪಟ್ಟಣ, ನಲ್ಲೂರು, ಬೂದಿಗೆರೆ, ಬಾಗಲೂರು ಮಾರ್ಗವಾಗಿ ಶಿವಾಜಿನಗರಕ್ಕೆ ಓಡಾಡುತ್ತಿದ್ದ ಹಲವು ಮಾರ್ಗಗಳ ಸಂಚಾರವನ್ನು ಏಕಾಏಕಿ ರದ್ದುಗೊಂಡಿದ್ದು, ನಿತ್ಯ ಈ ಮಾರ್ಗದಲ್ಲಿ ತೆರಳುತ್ತಿದ್ದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.</p>.<p>ವಿಜಯಪುರ ಪಟ್ಟಣದಿಂದ ಟಿನ್ ಫ್ಯಾಕ್ಟರಿ ಮಾರ್ಗವಾಗಿ ಕೆ.ಆರ್.ಪುರಂಗೆ ಸಂಚರಿಸಿದ್ದ ಬಿಎಂಟಿಸಿ ಬಸ್ ರದ್ದಾಗಿದೆ. ಈ ಮಾರ್ಗವಾಗಿ ನಿತ್ಯ ವಿವಿಧ ಕೆಲಸಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕಿದೆ.</p>.<p>ಗಂಟೆ ಗಟ್ಟಲೇ ಕಾದು ಖಾಸಗಿ ಬಸ್ನಲ್ಲಿ ಹೋಗಬೇಕು. ಆಟೊ, ವ್ಯಾನ್ಗಳನ್ನು ನೆಚ್ಚಿಕೊಳ್ಳವು ದುಸ್ಥಿತಿ ಒಂದೆಡೆಯಾದರೆ. ಮತ್ತೊಂದೆಡೆಯಲ್ಲಿ ದುಬಾರಿ ಶುಲ್ಕ ಕೊಟ್ಟು ಖಾಸಗಿ ವಾಹನಗಳ ಮೂಲಕ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.</p>.<p>ದೇವನಹಳ್ಳಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಸ್ಥಳ ಬೂದಿಗೆರೆಗೆ ಬಸ್ ಸಂಚಾರ ರದ್ದಾಗಿದೆ. ಇದರಿಂದ ವಿಜಯಪುರದಿಂದ ದೇವನಹಳ್ಳಿ ಪಟ್ಟಣಕ್ಕೆ ಬಸ್ ಮೂಲಕ ಬಂದು ಅಲ್ಲಿಂದ ಇನ್ನೊಂದು ಬಸ್ ಹಿಡುದು ಬೂದಿಗೆರೆಗೆ ಹೋಗಬೇಕಿದೆ ಎನ್ನುತ್ತಾರೆ ಬೆಸ್ಕಾಂ ಉದ್ಯೋಗಿ ವಿ.ಶಿವಮ್ಮ.</p>.<div><blockquote>ವಿಜಯಪುರದಿಂದ ಶಿವಾಜಿನಗರ ಬೂದಿಗೆರೆ ಕೆ.ಆರ್.ಪುರಂ ಮಾರ್ಗವಾಗಿ ಬಿಎಂಟಿಸಿ ಬಸ್ ಸೇವೆ ಬೇಕಿದೆ ಎಂದು ಸಾರ್ವಜನಿಕರಿಂದ ಮನವಿ ಪತ್ರ ಬಂದರೇ ಅದನ್ನು ಪರಿಶೀಲಿಸುತ್ತೇವೆ. </blockquote><span class="attribution">ವ್ಯವಸ್ಥಾಪಕ ದೇವನಹಳ್ಳಿ ಬಿಎಂಟಿಸಿ ಬಸ್ ಡಿಪೊ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ(ದೇವನಹಳ್ಳಿ):</strong> ಪಟ್ಟಣದಿಂದ ಕಳೆದ ಎರಡು ವರ್ಷಗಳ ಹಿಂದೆ ನೆರೆಯ ತಾಲ್ಲೂಕುಗಳ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು ಆರಂಭವಾಗಿದ್ದ ಬಿಎಂಟಿಸಿ ಬಸ್ ಸೇವೆ ಕಾಲ ಕ್ರಮೇಣ ಕ್ಷಿಣಿಸುತ್ತಿದ್ದ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ರದ್ದಾಗಿದೆ.</p>.<p>ವಿಜಯಪುರ ಪಟ್ಟಣದಿಂದ ಚನ್ನರಾಯಪಟ್ಟಣ, ನಲ್ಲೂರು, ಬೂದಿಗೆರೆ, ಬಾಗಲೂರು ಮಾರ್ಗವಾಗಿ ಶಿವಾಜಿನಗರಕ್ಕೆ ಓಡಾಡುತ್ತಿದ್ದ ಹಲವು ಮಾರ್ಗಗಳ ಸಂಚಾರವನ್ನು ಏಕಾಏಕಿ ರದ್ದುಗೊಂಡಿದ್ದು, ನಿತ್ಯ ಈ ಮಾರ್ಗದಲ್ಲಿ ತೆರಳುತ್ತಿದ್ದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.</p>.<p>ವಿಜಯಪುರ ಪಟ್ಟಣದಿಂದ ಟಿನ್ ಫ್ಯಾಕ್ಟರಿ ಮಾರ್ಗವಾಗಿ ಕೆ.ಆರ್.ಪುರಂಗೆ ಸಂಚರಿಸಿದ್ದ ಬಿಎಂಟಿಸಿ ಬಸ್ ರದ್ದಾಗಿದೆ. ಈ ಮಾರ್ಗವಾಗಿ ನಿತ್ಯ ವಿವಿಧ ಕೆಲಸಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕಿದೆ.</p>.<p>ಗಂಟೆ ಗಟ್ಟಲೇ ಕಾದು ಖಾಸಗಿ ಬಸ್ನಲ್ಲಿ ಹೋಗಬೇಕು. ಆಟೊ, ವ್ಯಾನ್ಗಳನ್ನು ನೆಚ್ಚಿಕೊಳ್ಳವು ದುಸ್ಥಿತಿ ಒಂದೆಡೆಯಾದರೆ. ಮತ್ತೊಂದೆಡೆಯಲ್ಲಿ ದುಬಾರಿ ಶುಲ್ಕ ಕೊಟ್ಟು ಖಾಸಗಿ ವಾಹನಗಳ ಮೂಲಕ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.</p>.<p>ದೇವನಹಳ್ಳಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಸ್ಥಳ ಬೂದಿಗೆರೆಗೆ ಬಸ್ ಸಂಚಾರ ರದ್ದಾಗಿದೆ. ಇದರಿಂದ ವಿಜಯಪುರದಿಂದ ದೇವನಹಳ್ಳಿ ಪಟ್ಟಣಕ್ಕೆ ಬಸ್ ಮೂಲಕ ಬಂದು ಅಲ್ಲಿಂದ ಇನ್ನೊಂದು ಬಸ್ ಹಿಡುದು ಬೂದಿಗೆರೆಗೆ ಹೋಗಬೇಕಿದೆ ಎನ್ನುತ್ತಾರೆ ಬೆಸ್ಕಾಂ ಉದ್ಯೋಗಿ ವಿ.ಶಿವಮ್ಮ.</p>.<div><blockquote>ವಿಜಯಪುರದಿಂದ ಶಿವಾಜಿನಗರ ಬೂದಿಗೆರೆ ಕೆ.ಆರ್.ಪುರಂ ಮಾರ್ಗವಾಗಿ ಬಿಎಂಟಿಸಿ ಬಸ್ ಸೇವೆ ಬೇಕಿದೆ ಎಂದು ಸಾರ್ವಜನಿಕರಿಂದ ಮನವಿ ಪತ್ರ ಬಂದರೇ ಅದನ್ನು ಪರಿಶೀಲಿಸುತ್ತೇವೆ. </blockquote><span class="attribution">ವ್ಯವಸ್ಥಾಪಕ ದೇವನಹಳ್ಳಿ ಬಿಎಂಟಿಸಿ ಬಸ್ ಡಿಪೊ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>