<p>ದೇವನಹಳ್ಳಿ: ಮೌಕ್ತಿಕಾಂಬ ಅಮ್ಮನವರ ಕರಗ ಮಹೋತ್ಸವ ಅಂಗವಾಗಿ ಶನಿವಾರ ಮುಂಜಾನೆ ಪಟ್ಟಣದ ಬೀದಿಗಳು ಹೂವಿನ ಹೊದಿಕೆಯಿಂದ ಕಂಗೊಳಿಸಿ ಭಕ್ತಿ ವೈಭವ ಮೆರೆದವು.</p>.<p>ಕರಗ ಮೆರವಣಿಗೆಯಲ್ಲಿ ಪೂಜಾರಿ ಉಮೇಶ್ ಕರಗವನ್ನು ಹೊತ್ತು ಸಾಗಿದ ವೇಳೆ ಹೂವಿನ ಹೊದಿಕೆಯ ಮೇಲೆ ನೃತ್ಯ ಪ್ರದರ್ಶಿಸಿದರು. ವೀರಕುಮಾರರು ‘ಗೋವಿಂದಾ’ ನಾಮಸ್ಮರಣೆಯೊಂದಿಗೆ ಮೆರವಣಿಗೆಗೆ ಚೈತನ್ಯ ತುಂಬಿದರು.</p>.<p>ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರು ಲಕ್ಷಾಂತರ ರೂಪಾಯಿ ಮೌಲ್ಯದ ಹೂಗಳಿಂದ ರಂಗೋಲಿ ಹಾಕಿ ಕರಗವನ್ನು ಸ್ವಾಗತಿಸಿದರು.</p>.<p>ಮಹಿಳೆಯರು ಮನೆಗಳ ಮುಂಭಾಗದಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿ ಕರಗಕ್ಕೆ ಸ್ವಾಗತ ಕೋರಿದರು. ದೇವಾಲಯದ ಒಳಹೊರ ಭಾಗಗಳನ್ನು ಹಣ್ಣು ಮತ್ತು ಹೂಗಳಿಂದ ಅಲಂಕರಿಸಲಾಗಿದ್ದು, ಭಕ್ತರ ದಂಡು ಹರಿದುಬಂತು. ವಿವಿಧೆಡೆ ಅನ್ನಸಂತರ್ಪಣೆ ನಡೆಯಿತು.</p>.<p>ಕರಗ ವೀರಕುಮಾರರ ಘರ್ಜನೆ ಹಾಗೂ ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರಿನ ಕರಗದ ನಂತರ ದೇವನಹಳ್ಳಿ ಕರಗಕ್ಕೂ ಪುರಾತನ ಪರಂಪರೆ ಇದೆ ಎಂದು ತಿಳಿದುಬರುತ್ತದೆ.</p>.<p>ಕರಗದ ಪೂಜಾರಿ ಉಮೇಶ್ ಎರಡನೇ ಬಾರಿ ಕರಗ ಹೊತ್ತು ನೃತ್ಯ ಪ್ರದರ್ಶಿಸಿದರು. ಮಧ್ಯರಾತ್ರಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ಕರಗವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗ್ಗೆ ಮತ್ತೆ ದೇವಾಲಯಕ್ಕೆ ವಾಪಸ್ಸಾಯಿತು. ಮಾರ್ಗಮಧ್ಯೆ ಭಕ್ತರು ಮಲ್ಲಿಗೆ ಹೂ ಅರ್ಪಿಸಿ ಭಕ್ತಿ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-15-945964739</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವನಹಳ್ಳಿ: ಮೌಕ್ತಿಕಾಂಬ ಅಮ್ಮನವರ ಕರಗ ಮಹೋತ್ಸವ ಅಂಗವಾಗಿ ಶನಿವಾರ ಮುಂಜಾನೆ ಪಟ್ಟಣದ ಬೀದಿಗಳು ಹೂವಿನ ಹೊದಿಕೆಯಿಂದ ಕಂಗೊಳಿಸಿ ಭಕ್ತಿ ವೈಭವ ಮೆರೆದವು.</p>.<p>ಕರಗ ಮೆರವಣಿಗೆಯಲ್ಲಿ ಪೂಜಾರಿ ಉಮೇಶ್ ಕರಗವನ್ನು ಹೊತ್ತು ಸಾಗಿದ ವೇಳೆ ಹೂವಿನ ಹೊದಿಕೆಯ ಮೇಲೆ ನೃತ್ಯ ಪ್ರದರ್ಶಿಸಿದರು. ವೀರಕುಮಾರರು ‘ಗೋವಿಂದಾ’ ನಾಮಸ್ಮರಣೆಯೊಂದಿಗೆ ಮೆರವಣಿಗೆಗೆ ಚೈತನ್ಯ ತುಂಬಿದರು.</p>.<p>ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರು ಲಕ್ಷಾಂತರ ರೂಪಾಯಿ ಮೌಲ್ಯದ ಹೂಗಳಿಂದ ರಂಗೋಲಿ ಹಾಕಿ ಕರಗವನ್ನು ಸ್ವಾಗತಿಸಿದರು.</p>.<p>ಮಹಿಳೆಯರು ಮನೆಗಳ ಮುಂಭಾಗದಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿ ಕರಗಕ್ಕೆ ಸ್ವಾಗತ ಕೋರಿದರು. ದೇವಾಲಯದ ಒಳಹೊರ ಭಾಗಗಳನ್ನು ಹಣ್ಣು ಮತ್ತು ಹೂಗಳಿಂದ ಅಲಂಕರಿಸಲಾಗಿದ್ದು, ಭಕ್ತರ ದಂಡು ಹರಿದುಬಂತು. ವಿವಿಧೆಡೆ ಅನ್ನಸಂತರ್ಪಣೆ ನಡೆಯಿತು.</p>.<p>ಕರಗ ವೀರಕುಮಾರರ ಘರ್ಜನೆ ಹಾಗೂ ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರಿನ ಕರಗದ ನಂತರ ದೇವನಹಳ್ಳಿ ಕರಗಕ್ಕೂ ಪುರಾತನ ಪರಂಪರೆ ಇದೆ ಎಂದು ತಿಳಿದುಬರುತ್ತದೆ.</p>.<p>ಕರಗದ ಪೂಜಾರಿ ಉಮೇಶ್ ಎರಡನೇ ಬಾರಿ ಕರಗ ಹೊತ್ತು ನೃತ್ಯ ಪ್ರದರ್ಶಿಸಿದರು. ಮಧ್ಯರಾತ್ರಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ಕರಗವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗ್ಗೆ ಮತ್ತೆ ದೇವಾಲಯಕ್ಕೆ ವಾಪಸ್ಸಾಯಿತು. ಮಾರ್ಗಮಧ್ಯೆ ಭಕ್ತರು ಮಲ್ಲಿಗೆ ಹೂ ಅರ್ಪಿಸಿ ಭಕ್ತಿ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-15-945964739</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>