ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಯಿರ ಬೆಟ್ಟದ ಉಳಿವಿಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ, ಯಾವುದೇ ಉಪಯೋಗ ಆಗುತ್ತಿಲ್ಲ. ಈ ಪ್ರದೇಶದಲ್ಲಿ ಚಿರತೆ ಸೇರಿದಂತೆ ಸಾಕಷ್ಟು ವನ್ಯ ಜೀವಿಗಳು ವಾಸಿಸುತ್ತಿವೆ. ಔಷಧಿಯ ಗುಣ ಹೊಂದಿರುವ ಸಸ್ಯ ಸಂಪತ್ತು ಇದೆ. ಇವೆಲ್ಲವು ಬೆಂಕಿಯ ಕೆನ್ನಾಲಿಗೆ ನಷ್ಟವಾಗುತ್ತಿದೆ ಎನ್ನುವುದು ಗ್ರಾಮಸ್ಥರ ಕಳವಳ.