ತಾಲ್ಲೂಕಿನ ನಲ್ಲೂರು ಗ್ರಾಮದ ಶಿವರಾಜ್ ಎಂಬುವರ ತೋಟದಲ್ಲಿದ್ದ ಮಿರಾಬೆಲ್ ಗುಲಾಬಿ ಹೂವು ಗುರುವಾರ ತಡರಾತ್ರಿ 50 ಕೆ.ಜಿ ಹೂ ಕಳುವಾಗಿದ್ದು, ಸುಮಾರು ₹10,000 ನಷ್ಟ ಉಂಟಾಗಿದೆ. ಸುತ್ತಮುತ್ತಲಿನ ಮಲ್ಲೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುಲಾಬಿ ಹೂ ಕಳತನವಾಗುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತಿದ್ದು, ರೈತರು ಸಂಕ್ರಾಂತಿ ವೇಳೆಗೆ ಹೂವುಗಳನ್ನು ಕಾಯಲು ರಾತ್ರಿ ವೇಳೆಯಲ್ಲಿ ಕಾವಲು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.