ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಮಲೆ ಮಹದೇಶ್ವರ ಬೆಟ್ಟ ಸುಪ್ರಸಿದ್ದ ಪುಣ್ಯಕ್ಷೇತ್ರ. ಇಲ್ಲಿ ನೆಲೆನಿಂತಿರುವ ಮಹದೇಶ್ವರ ದಕ್ಷಿಣ ಕರ್ನಾಟಕದ ಬಹುತೇಕ ಜನರ ಆರಾಧ್ಯ ದೈವವೂ ಹೌದು. ಕರ್ನಾಟಕ-ತಮಿಳುನಾಡು ಎರಡು ರಾಜ್ಯಗಳಲ್ಲೂ ಅತಿ ಹೆಚ್ಚು ಭಕ್ತರನ್ನು ಈ ಕ್ಷೇತ್ರ ಹೊಂದಿದೆ. ಇಲ್ಲಿಗೆ ಪ್ರತಿ ವರ್ಷ ಶಿವರಾತ್ರಿ, ಯುಗಾದಿ, ಗೌರಿ ಹಬ್ಬ, ಮಹಾಲಯ ಅಮಾವಾಸ್ಯೆ, ದೀಪಾವಳಿ, ಹಾಗೂ ಕಾರ್ತೀಕ ಮಾಸದಲ್ಲಿ ದೊಡ್ಡ-ದೊಡ್ಡ ಜಾತ್ರೆಗಳೇ ನಡೆಯುತ್ತವೆ. ಅಲ್ಲದೆ, ಪ್ರತಿ ಅಮಾವಾಸ್ಯೆಗೂ ಎಣ್ಣೆ ಮಜ್ಜನ ಸೇವೆ ನಡೆಯುತ್ತದೆ.