ಸ್ಪಂದಿಸಿಲ್ಲ: ಗೋದಾಮಿನಲ್ಲಿ ಧಾನ್ಯಗಳ ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಿರುವ, ಇಡೀ ಕಟ್ಟಡ ಶಿಥಿಲ ಹಂತಕ್ಕೆ ತಲುಪಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಗೋದಾಮು ನವೀಕರಣಕ್ಕೆ ಮನವಿ ಕೂಡ ಮಾಡಲಾಗಿದೆ. ಆದರೆ, ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಗೋದಾಮು ಮೆಲ್ವೀಚಾರಕ ವಿಶ್ವರಾದ್ಯ ನಾಗನೂರಮಠ ‘ಪ್ರಜಾವಾಣಿ’ಗೆ ತಿಳಿಸಿದರು.