ತರೀಕೆರೆ/ಕೊಟ್ಟಿಗೆಹಾರ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಶಾಸಕ ಡಿ.ಎಸ್.ಸುರೇಶ್ ಭಾನುವಾರ ಮನೆಯಲ್ಲೇ ಉಳಿದರು. ನಿತ್ಯದ ಜಂಜಡಗಳನ್ನು ಮರೆತು ಅಡುಗೆ ಮನೆಗೆ ತೆರಳಿದ ಅವರು, ಹೆಂಡತಿ ಮಕ್ಕಳಿಗೆ ಪೂರಿ ತಯಾರಿಸಿಕೊಟ್ಟರು.
ಅಡುಗೆಮನೆಯಲ್ಲಿ ನೆಲದ ಮೇಲೆ ಕುಳಿತಿದ್ದ ಪತ್ನಿಗೆ ಪ್ರೀತಿಯಿಂದ ತಾವೇ ಉಬ್ಬಿಸಿದ ಪೂರಿ ಬಡಿಸಿದರು. ಮಗಳಿಗೂ ಸಾಕೆನಿಸುವಷ್ಟು ಪೂರಿ ತಯಾರಿಸಿಕೊಟ್ಟರು.