<p><strong>ದೊಡ್ಡಬಳ್ಳಾಪುರ: </strong>2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ತಾಲ್ಲೂಕಿಗೆ ನಿರ್ದಿಷ್ಟವಾಗಿ ಘೊಷಣೆಯಾಗಿರುವ ₹650 ಕೋಟಿಯ ದೊಡ್ಡಮೊತ್ತದ ಯೋಜನೆ ಬೆಂಗಳೂರಿನ ವೃಷಾಭವತಿಯ ಕೊಳಚೆ ನೀರನ್ನು ಶುದ್ಧೀಕರಿಸಿ 119 ಕೆರೆಗಳಿಗೆ ತುಂಬಿಸುವುದು ಮಾತ್ರ. ಉಳಿದಂತೆ ಒಂದಿಷ್ಟು ಪ್ರಸ್ತಾವನೆ, ಒಂದಿಷ್ಟು ಮಂಜೂರಾತಿಯಾಗಿವೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.</p>.<p>ತಾಲ್ಲೂಕಿನ ಆದಿನಾರಾಯಣಹೊಸಹಳ್ಳಿಯಲ್ಲಿ ವಿಜ್ಞಾನ ನಗರ ನಿರ್ಮಾಣಕ್ಕೆ ₹233 ಕೋಟಿ ವೆಚ್ಚದದಲ್ಲಿ ನಿರ್ಮಿಸಲು ವರದಿ ಕೇಂದ್ರಕ್ಕೆ ಸಲ್ಲಿಕೆ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಒಳಚರಂಡಿ ಅಭಿವೃದ್ದಿ, ತಾಲ್ಲೂಕಿನಲ್ಲಿ ಪ್ಯಾರಮೆಡಿಕಲ್ ಕೋರ್ಸ್, ಸಂಚಾರ ಪೊಲೀಸ್ ಠಾಣೆ, ತಾಲ್ಲೂಕಿನ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಗುಂಡಮಗೆರೆ ಕ್ರಾಸ್ ಬಳಿ ಶ್ರಮಿಕ ವಸತಿ ಪ್ರಾರಂಭಿಸಲು ಬಜೆಟ್ನಲ್ಲಿ ನಿರ್ದಿಷ್ಟವಾಗಿ ತಿಳಿಸಲಾಗಿದೆ.</p>.<p>ಶಂಕುಸ್ಥಾಪನೆಯಾಗಿ ಕಾಮಾಗಾರಿ ಆರಂಭವಾಗಿ ನಿಂತಿರುವ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ವಿವಿಧ ಸಂಘ ಸಂಸ್ಥೆಗಳು ಹಲವಾರು ಬಾರಿ ಹೋರಾಟ ಮಾಡಿ ಮುಖ್ಯಮಂತ್ರಿಗಳಿಂದ ಎಲ್ಲಾ ಸಚಿವರಿಗು ಮನವಿಗಳನ್ನು ಸಲ್ಲಿಸಿದ್ದರು ಸಹ ಬಜೆಟ್ನಲ್ಲಿ ನಿರ್ಧಿಷ್ಟವಾಗಿ ಹಣ ಮೀಸಲಿಟ್ಟು ತಿಳಿಸಿಲ್ಲ. ಇನ್ನು ಅರ್ಕಾವತಿ ನದಿ ಪಾತ್ರದಲ್ಲಿ ಕಲುಷಿತವಾಗಿರುವ ಮರಾಹೊಸಹಳ್ಳಿ, ದೊಡ್ಡತುಮಕೂರು ಕೆರೆಗಳಿಗೆ ಮೂರನೇ ಹಂತದ ಶುದ್ಧೀಕರಣ ಘಟಕಕ್ಕೆ ಹಣ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ ಬಜೆಟ್ನಲ್ಲಿ ನಿರ್ದಿಷ್ಟವಾಗಿ ತಿಳಿಸದೆ ದೊಡ್ಡಬಳ್ಳಾಪುರ, ದೇವನಹಳ್ಳಿ ಒಳಚರಂಡಿ ಅಭಿವೃದ್ಧಿ ಎಂದು ಮಾತ್ರ ತಿಳಿಸಿದೆ.</p>.<h2> ಮನವಿಗೆ ಸಿಗದ ಸ್ಪಂದನೆ</h2><p> ರಾಜ್ಯ ಬಜೆಟ್ ಕುರಿತು ನಮ್ಮ ನಿರೀಕ್ಷೆಗಳು ಹುಸಿಯಾಗಿವೆ. ಜಿಲ್ಲಾ ಆಸ್ಪತ್ರೆಗಾಗಿ ಹತ್ತಾರು ಬಾರಿ ಎಲ್ಲಾ ಅಧಿಕಾರಿಗಳು ಸಚಿವರ ಬಳಿಗೆ ನಿಯೋಗ ಹೋಗಿ ಮನವಿಗಳನ್ನು ಸಲ್ಲಿಸಿದ್ದರು ಯಾವುದೇ ರೀತಿಯ ಸ್ಪಂದನೆಯು ಇಲ್ಲದಾಗಿದೆ. ಹಾಗೆಯೇ ಇಡೀ ಕಾಮಗಾರಿ ಪೂರ್ಣಗೊಂಡಿದ್ದರು ಕನಿಷ್ಠ ಮೊತ್ತದ ಆರ್ಥಿಕ ನೆರವು ನೀಡಿ ಇ.ಎಸ್.ಐ ಆಸ್ಪತ್ರೆ ಪ್ರಾರಂಭದ ನಿರೀಕ್ಷೆಯು ಕ್ಷೀಣಿಸಿದೆ. ಸಂಜೀವ್ನಾಯಕ್ ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿ ಮುಖಂಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: </strong>2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ತಾಲ್ಲೂಕಿಗೆ ನಿರ್ದಿಷ್ಟವಾಗಿ ಘೊಷಣೆಯಾಗಿರುವ ₹650 ಕೋಟಿಯ ದೊಡ್ಡಮೊತ್ತದ ಯೋಜನೆ ಬೆಂಗಳೂರಿನ ವೃಷಾಭವತಿಯ ಕೊಳಚೆ ನೀರನ್ನು ಶುದ್ಧೀಕರಿಸಿ 119 ಕೆರೆಗಳಿಗೆ ತುಂಬಿಸುವುದು ಮಾತ್ರ. ಉಳಿದಂತೆ ಒಂದಿಷ್ಟು ಪ್ರಸ್ತಾವನೆ, ಒಂದಿಷ್ಟು ಮಂಜೂರಾತಿಯಾಗಿವೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.</p>.<p>ತಾಲ್ಲೂಕಿನ ಆದಿನಾರಾಯಣಹೊಸಹಳ್ಳಿಯಲ್ಲಿ ವಿಜ್ಞಾನ ನಗರ ನಿರ್ಮಾಣಕ್ಕೆ ₹233 ಕೋಟಿ ವೆಚ್ಚದದಲ್ಲಿ ನಿರ್ಮಿಸಲು ವರದಿ ಕೇಂದ್ರಕ್ಕೆ ಸಲ್ಲಿಕೆ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಒಳಚರಂಡಿ ಅಭಿವೃದ್ದಿ, ತಾಲ್ಲೂಕಿನಲ್ಲಿ ಪ್ಯಾರಮೆಡಿಕಲ್ ಕೋರ್ಸ್, ಸಂಚಾರ ಪೊಲೀಸ್ ಠಾಣೆ, ತಾಲ್ಲೂಕಿನ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಗುಂಡಮಗೆರೆ ಕ್ರಾಸ್ ಬಳಿ ಶ್ರಮಿಕ ವಸತಿ ಪ್ರಾರಂಭಿಸಲು ಬಜೆಟ್ನಲ್ಲಿ ನಿರ್ದಿಷ್ಟವಾಗಿ ತಿಳಿಸಲಾಗಿದೆ.</p>.<p>ಶಂಕುಸ್ಥಾಪನೆಯಾಗಿ ಕಾಮಾಗಾರಿ ಆರಂಭವಾಗಿ ನಿಂತಿರುವ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ವಿವಿಧ ಸಂಘ ಸಂಸ್ಥೆಗಳು ಹಲವಾರು ಬಾರಿ ಹೋರಾಟ ಮಾಡಿ ಮುಖ್ಯಮಂತ್ರಿಗಳಿಂದ ಎಲ್ಲಾ ಸಚಿವರಿಗು ಮನವಿಗಳನ್ನು ಸಲ್ಲಿಸಿದ್ದರು ಸಹ ಬಜೆಟ್ನಲ್ಲಿ ನಿರ್ಧಿಷ್ಟವಾಗಿ ಹಣ ಮೀಸಲಿಟ್ಟು ತಿಳಿಸಿಲ್ಲ. ಇನ್ನು ಅರ್ಕಾವತಿ ನದಿ ಪಾತ್ರದಲ್ಲಿ ಕಲುಷಿತವಾಗಿರುವ ಮರಾಹೊಸಹಳ್ಳಿ, ದೊಡ್ಡತುಮಕೂರು ಕೆರೆಗಳಿಗೆ ಮೂರನೇ ಹಂತದ ಶುದ್ಧೀಕರಣ ಘಟಕಕ್ಕೆ ಹಣ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ ಬಜೆಟ್ನಲ್ಲಿ ನಿರ್ದಿಷ್ಟವಾಗಿ ತಿಳಿಸದೆ ದೊಡ್ಡಬಳ್ಳಾಪುರ, ದೇವನಹಳ್ಳಿ ಒಳಚರಂಡಿ ಅಭಿವೃದ್ಧಿ ಎಂದು ಮಾತ್ರ ತಿಳಿಸಿದೆ.</p>.<h2> ಮನವಿಗೆ ಸಿಗದ ಸ್ಪಂದನೆ</h2><p> ರಾಜ್ಯ ಬಜೆಟ್ ಕುರಿತು ನಮ್ಮ ನಿರೀಕ್ಷೆಗಳು ಹುಸಿಯಾಗಿವೆ. ಜಿಲ್ಲಾ ಆಸ್ಪತ್ರೆಗಾಗಿ ಹತ್ತಾರು ಬಾರಿ ಎಲ್ಲಾ ಅಧಿಕಾರಿಗಳು ಸಚಿವರ ಬಳಿಗೆ ನಿಯೋಗ ಹೋಗಿ ಮನವಿಗಳನ್ನು ಸಲ್ಲಿಸಿದ್ದರು ಯಾವುದೇ ರೀತಿಯ ಸ್ಪಂದನೆಯು ಇಲ್ಲದಾಗಿದೆ. ಹಾಗೆಯೇ ಇಡೀ ಕಾಮಗಾರಿ ಪೂರ್ಣಗೊಂಡಿದ್ದರು ಕನಿಷ್ಠ ಮೊತ್ತದ ಆರ್ಥಿಕ ನೆರವು ನೀಡಿ ಇ.ಎಸ್.ಐ ಆಸ್ಪತ್ರೆ ಪ್ರಾರಂಭದ ನಿರೀಕ್ಷೆಯು ಕ್ಷೀಣಿಸಿದೆ. ಸಂಜೀವ್ನಾಯಕ್ ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿ ಮುಖಂಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>