ಭೂಸ್ವಾಧೀನಕ್ಕೆ ಒಳಪಡುತ್ತಿರುವ ಕೃಷಿ ಭೂಮಿಯನ್ನು ನಂಬಿ ಹೈನುಗಾರಿಕೆಯಿಂದ ನೂರಾರು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಕಣ್ಣಿಲ್ಲದ ಕುರುಡರಂತೆ ಅಧಿಕಾರಿಗಳು ಖಾಲಿ ಜಮೀನು ಎಂದು ವರದಿ ನೀಡಿದ್ದಾರೆ. ಈ ರೀತಿಯ ವರದಿ ನೀಡಿರುವ ಅಧಿಕಾರಿಗಳು ಹೊಟ್ಟೆಗೆ ಮಣ್ಣು ತುಂದು ಬದುಕುತ್ತಿರಬಹುದು. ಅನ್ನ ತಿನ್ನುವ ಜನ ಇಂತಹ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ.
ಜಯಮ್ಮ, ರೈತ ಮಹಿಳೆ
ಶಕ್ತಿ ಮೀರಿ ಹೋರಾಟ ನಡೆಸುತ್ತೆವೆ
ಇಲ್ಲಸಲ್ಲದ ವಿದ್ಯುತ್ ಸರಬರಾಜಿನಲ್ಲಿ ರಾತ್ರಿ ಹಗಲೆನ್ನದೆ ನೀರು ಹಾಯಿಸು ಬೆಳೆಸಲಾಗಿರುವ ಅಡಿಕೆ, ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ನಮ್ಮ ಶಕ್ತಿ ಮೀರಿ ಹೋರಾಟ ನಡೆಸುತ್ತೇವೆ. ನಮ್ಮ ಹಿರಿಯರು ಉಳಿಕೊಟ್ಟು ಹೋಗಿರುವ ಭೂಮಿಯ ಉಳಿವಿನ ಹೋರಾಟಕ್ಕಾಗಿ ನಮ್ಮ ಬದುಕನ್ನೇ ಮೀಸಲಿಡಲಿದ್ದೇವೆ.