<p>ದೊಡ್ಡಬಳ್ಳಾಪುರ: ತಾಲ್ಲೂಕಿನ ಆರೂಢಿ ಗ್ರಾಮದ ಸಮೀಪ ಗುರುವಾರ ವಿದ್ಯುತ್ ಪರಿವರ್ತಕದಲ್ಲಿ (ಟಿ.ಸಿ) ಕಾಣಿಸಿಕೊಂಡ ಕಿಡಿ ಪಕ್ಕದ ಜಮೀನಿಗೆ ವ್ಯಾಪಿಸಿ ಸುಮಾರು 40ಕ್ಕೂ ಹೆಚ್ಚು ಎಕರೆ ಜಮೀನನಲ್ಲಿ ಬೆಳೆದಿದ್ದ ಮಾವು, ಅಡಿಕೆ, ತೆಂಗು, ಜಂಬು ನೇರಳೆ ಗಿಡಗಳು ಬೆಂಕಿಗೆ ಆಹುತಿಯಾಗಿವೆ.</p>.<p>ಬೆಂಗಳೂರಿನ ನಾಗರಾಜು ಎಂಬುವರಿಗೆ ಸೇರಿದ ಸುಮಾರು 48 ಎಕರೆ ಜಮೀನಲ್ಲಿ ಬೆಳೆಯಲಾಗಿದ್ದ 20 ಎಕರೆ ಮಾವು, ತೆಂಗು, ಅಡಿಕೆ, 28 ಎಕರೆ ಜಂಬು ನೇರಳೆ ಮರಗಳು ಬೆಂಕಿಗೆ ಆಹುತಿಯಾಗಿವೆ.</p>.<p>ಸುಮಾರು ₹5 ಲಕ್ಷ ಮೌಲ್ಯದ ಮಾವು, ಐದು ಸಾವಿರ ಅಡಿಕೆ ಗಿಡ, ನಾಲ್ಕು ಸಾವಿರ ಜಂಬು ನೇರಳೆ ಮರ, ನಾಲ್ಕು ನೂರಕ್ಕೂ ಹೆಚ್ಚು ತೆಂಗಿನ ಮರ ಸುಟ್ಟು ಕರಕಲಾಗಿವೆ. ಜೊಎತೆಗೆ ₹5 ಲಕ್ಷ ಮೌಲ್ಯದ ಹನಿ ನೀರಾವರಿ ಘಟಕದ ಪೈಪ್ಲೈನ್ ಭಸ್ಮವಾಗಿದೆಎಂದು ಜಮೀನು ಮಾಲೀಕ ನಾಗರಾಜು ತಿಳಿಸಿದ್ದಾರೆ.</p>.<p>ಘಟನೆ ನಡೆದಿರುವುದೇ ಗೊತ್ತಿಲ್ಲ: ಈ ಬಗ್ಗೆ ಬೆಸ್ಕಾಂ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಳಗ್ಗೆ 9.30ಕ್ಕೆ ಘಟನೆ ನಡೆದದ್ದು, ಮಾಧ್ಯಮವರು ತಿಳಿಸುವವರೆಗೂ ಮಾಹಿತಿ ಗೊತ್ತಾಗಿಲ್ಲ. ಕೂಡಲೇ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-15-1665473856</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೊಡ್ಡಬಳ್ಳಾಪುರ: ತಾಲ್ಲೂಕಿನ ಆರೂಢಿ ಗ್ರಾಮದ ಸಮೀಪ ಗುರುವಾರ ವಿದ್ಯುತ್ ಪರಿವರ್ತಕದಲ್ಲಿ (ಟಿ.ಸಿ) ಕಾಣಿಸಿಕೊಂಡ ಕಿಡಿ ಪಕ್ಕದ ಜಮೀನಿಗೆ ವ್ಯಾಪಿಸಿ ಸುಮಾರು 40ಕ್ಕೂ ಹೆಚ್ಚು ಎಕರೆ ಜಮೀನನಲ್ಲಿ ಬೆಳೆದಿದ್ದ ಮಾವು, ಅಡಿಕೆ, ತೆಂಗು, ಜಂಬು ನೇರಳೆ ಗಿಡಗಳು ಬೆಂಕಿಗೆ ಆಹುತಿಯಾಗಿವೆ.</p>.<p>ಬೆಂಗಳೂರಿನ ನಾಗರಾಜು ಎಂಬುವರಿಗೆ ಸೇರಿದ ಸುಮಾರು 48 ಎಕರೆ ಜಮೀನಲ್ಲಿ ಬೆಳೆಯಲಾಗಿದ್ದ 20 ಎಕರೆ ಮಾವು, ತೆಂಗು, ಅಡಿಕೆ, 28 ಎಕರೆ ಜಂಬು ನೇರಳೆ ಮರಗಳು ಬೆಂಕಿಗೆ ಆಹುತಿಯಾಗಿವೆ.</p>.<p>ಸುಮಾರು ₹5 ಲಕ್ಷ ಮೌಲ್ಯದ ಮಾವು, ಐದು ಸಾವಿರ ಅಡಿಕೆ ಗಿಡ, ನಾಲ್ಕು ಸಾವಿರ ಜಂಬು ನೇರಳೆ ಮರ, ನಾಲ್ಕು ನೂರಕ್ಕೂ ಹೆಚ್ಚು ತೆಂಗಿನ ಮರ ಸುಟ್ಟು ಕರಕಲಾಗಿವೆ. ಜೊಎತೆಗೆ ₹5 ಲಕ್ಷ ಮೌಲ್ಯದ ಹನಿ ನೀರಾವರಿ ಘಟಕದ ಪೈಪ್ಲೈನ್ ಭಸ್ಮವಾಗಿದೆಎಂದು ಜಮೀನು ಮಾಲೀಕ ನಾಗರಾಜು ತಿಳಿಸಿದ್ದಾರೆ.</p>.<p>ಘಟನೆ ನಡೆದಿರುವುದೇ ಗೊತ್ತಿಲ್ಲ: ಈ ಬಗ್ಗೆ ಬೆಸ್ಕಾಂ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಳಗ್ಗೆ 9.30ಕ್ಕೆ ಘಟನೆ ನಡೆದದ್ದು, ಮಾಧ್ಯಮವರು ತಿಳಿಸುವವರೆಗೂ ಮಾಹಿತಿ ಗೊತ್ತಾಗಿಲ್ಲ. ಕೂಡಲೇ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-15-1665473856</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>