<p><strong>ಹೊಸಕೋಟೆ</strong>: ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡ ಹುಲ್ಲೂರು ಗ್ರಾಮದ ಪುರಾತನ, ಐತಿಹಾಸಿಕ ಕೆರೆ ಈಗ ಕಸ ಸರಿಯುವ ಜಾಗವಾಗಿ ಮಾರ್ಪಟ್ಟಿದ್ದು, ಕೆರೆ ಅಸ್ತಿತ್ವಕ್ಕೆ ಕುತ್ತು ಬಂದಿದೆ.</p>.<p>ಪ್ರಾಚೀನ ಇತಿಹಾಸ ಹೊಂದಿರುವ ಹಾಗೂ ಪುಲಿಯೂರು ಎಂದು ಕೆರೆಯಲಾಗುತ್ತಿದ್ದ ದೊಡ್ಡಹುಲ್ಲೂರಲ್ಲಿ ಕ್ರಿ.ಶ.567ರ ಹಿಂದೆ ಕೆರೆ ನಿರ್ಮಾಣವಾಗಿರುವ ಕುರಿತು ತಾಮ್ರಪಟ ಶಾಸನಗಳು ಉಲ್ಲೇಖಿಸುತ್ತವೆ. 15 ಶತಮಾನದಿಂದ ಜನ ಮತ್ತು ಜಾನುವಾರುಗಳಿಗೆ ಜೀವನಾಡಿಯಾಗಿದ್ದ ಕೆರೆ ಈಚೆಗೆ ತನ್ನ ಅಸ್ತಿತ್ವಕ್ಕೆ ಕಳೆದುಕೊಳ್ಳುತ್ತಿದೆ. ಜನ ಮತ್ತು ಆಡಳಿತಗಳ ನಿರ್ಲಕ್ಷ್ಯದಿಂದ ಕೆರೆ ಕಸದ ತೊಟ್ಟಿಯಾಗುತ್ತಿದೆ.</p>.<p>ಕೆರೆ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ತಾಲ್ಲೂಕಿನಲ್ಲೇ ದೊಡ್ಡ ಕೆರೆ ಇದಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಈ ಕೆರೆ ಸೇರುತ್ತದೆ. ಕೆರೆಗೆ ಸಮೀಪದಲ್ಲಿರುವ ಚೊಕ್ಕಹಳ್ಳಿ ಕೈಗಾರಿಕೆ ಪ್ರದೇಶ, ಮಳಿಗೆಗಳ ಗೋದಾಮಿನ ತ್ಯಾಜ್ಯವನ್ನು ರಾತ್ರಿ ವೇಳೆ ಸುರಿಯಲಾಗುತ್ತಿದೆ ಎಂದ ಆರೋಪವಿದೆ. ಗ್ರಾಮ ಪಂಚಾಯಿತಿ ವ್ಯಾಪಿಯ ತ್ಯಾಜ್ಯವನ್ನು ಇಲ್ಲೇ ವಿಲೇವಾರಿ ಮಾಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.</p>.<p>ಕೆರೆ ಅಂಗಳದಲ್ಲಿ ಸುರಿದಿರುವ ಕೈಗಾರಿಕಾ ತ್ಯಾಜ್ಯ ಕೊಳೆತು ಕೆರೆ ಒಡಲು ಸೇರುತ್ತಿದೆ. ಇದರಿಂದ ಭೂಮಿ ಮತ್ತು ಅಂತರ್ಜಲ ವಿಷವಾಗುತ್ತಿದೆ. ಮುಂದಿನ ದಿನದಲ್ಲಿ ಕೆರೆ ಎತ್ತಿನ ಹೊಳೆ ನೀರು ಹರಿದರೆ ಊರಿನ ಅಂತರ್ಜಲವೇ ವಿಷವಾಗುತ್ತದೆ ಎನ್ನುವ ಆತಂಕ ಗ್ರಾಮಸ್ಥರದಲ್ಲಿ ಮನೆ ಮಾಡಿದೆ.</p>.<p>ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿದೆ. ಗ್ರಾಮ ಪಂಚಾಯಿತಿ ಕಚೇರಿಯ ಕೂಗಳತೆ ದೂರದಲ್ಲಿ ಕೆರೆ ಇದೆ. ಆದರೆ ಪಂಚಾಯಿತಿ ಕೆರೆಯಲ್ಲಿ ಕಸ ಸುರಿಯುತ್ತಿದ್ದರೂ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸುಮ್ಮನೆ ಕುಳಿತಿದೆ.</p>.<p><strong>ಎತ್ತಿನ ಹೊಳೆ ನೀರು:</strong> ಕೆರೆಗೆ ಎತ್ತಿನ ಹೊಳೆ ನೀರು ಹರಿಸಲು ಕೆರೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಇದಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ₹3 ಕೋಟಿ ಹಣ ವ್ಯಯಿಸಲಾಗಿದೆ. ಅದರಂತೆ ಕೆರೆಯ ಕಟ್ಟೆಗೆ ಕಲ್ಲು ಕಟ್ಟಡ, ತೂಬು, ಕೆರೆಯ ಇಳಿಜಾರಿಗೆ ಹುಲ್ಲುಹಾಸು ಹಾಕಲಾಗಿದೆ. ಶಿಥಿಲಗೊಂಡಿದ್ದ ಕೆರೆಯ ಎರಡೂ ಭಾಗದ ಕೋಡಿಗಳನ್ನು ದುರಸ್ತಿ ಮಾಡಿ, ಕೆರೆಯ ಪೋಷಕ ಕಾಲುವೆ ಅಭಿವೃದ್ಧಿಪಡಿಸಲಾಗಿದೆ. ಕೆರೆಗೆ ಒಂದು ರೂಪ ನೀಡಲಾಗಿದೆ. ಆದರೆ ಇಲ್ಲಿ ಸುರಿಯುತ್ತಿರುವ ಕಸ ಕೆರೆ ಅಂದಕ್ಕೆ ಕಪ್ಪು ಚುಕ್ಕೆಯಾಗಿದೆ.</p>.<div><blockquote>ಕೆರೆಯಲ್ಲಿ ಕಸ ಸುರಿಯುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಕೈಗೊಳ್ಳಲಾಗುವುದು</blockquote><span class="attribution">ಮಂಜುನಾಥರೆಡ್ಡಿ ಎಇಇ ಸಣ್ಣ ನೀರಾವರಿ ಇಲಾಖೆ</span></div>.<div><blockquote>ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆ ಅಂಗಳ ಮತ್ತು ಸುತ್ತಮುತ್ತ ಕಸ ಸುರಿಯದಂತೆ ಎಚ್ಚರಿಕೆವಹಿಸಬೇಕು. ಕೆರೆ ಪೋಷಕ ಕಾಲುವೆ ದುರಸ್ತಿಗೊಳಿಸಬೇಕು</blockquote><span class="attribution">ದೊಡ್ಡಹುಲ್ಲೂರು ರುಕ್ಕೋಜಿ ಸಾಹಿತಿ</span></div>.<div><blockquote>ಸಾವಿರ ವರ್ಷಗಳ ಇತಿಹಾಸವಿರುವ ದೊಡ್ಡಹುಲ್ಲೂರಿನ ಕೆರೆಯನ್ನು ನಾವೆಲ್ಲರೂ ಉಳಿಸಬೇಕಿದೆ. ಕೆರೆಗೆ ಸುರಿಯುತ್ತಿರುವ ತ್ಯಾಜ್ಯವನ್ನು ಈ ಕೂಡಲೆ ನಿಲ್ಲಿಸುವಂತೆ ಕ್ರಮ ಕೈಗೊಳ್ಳಲಿ.</blockquote><span class="attribution">ಡಿ.ಎನ್.ಸುದರ್ಶನ್ರೆಡ್ಡಿ ಇತಿಹಾಸಕಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ</strong>: ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡ ಹುಲ್ಲೂರು ಗ್ರಾಮದ ಪುರಾತನ, ಐತಿಹಾಸಿಕ ಕೆರೆ ಈಗ ಕಸ ಸರಿಯುವ ಜಾಗವಾಗಿ ಮಾರ್ಪಟ್ಟಿದ್ದು, ಕೆರೆ ಅಸ್ತಿತ್ವಕ್ಕೆ ಕುತ್ತು ಬಂದಿದೆ.</p>.<p>ಪ್ರಾಚೀನ ಇತಿಹಾಸ ಹೊಂದಿರುವ ಹಾಗೂ ಪುಲಿಯೂರು ಎಂದು ಕೆರೆಯಲಾಗುತ್ತಿದ್ದ ದೊಡ್ಡಹುಲ್ಲೂರಲ್ಲಿ ಕ್ರಿ.ಶ.567ರ ಹಿಂದೆ ಕೆರೆ ನಿರ್ಮಾಣವಾಗಿರುವ ಕುರಿತು ತಾಮ್ರಪಟ ಶಾಸನಗಳು ಉಲ್ಲೇಖಿಸುತ್ತವೆ. 15 ಶತಮಾನದಿಂದ ಜನ ಮತ್ತು ಜಾನುವಾರುಗಳಿಗೆ ಜೀವನಾಡಿಯಾಗಿದ್ದ ಕೆರೆ ಈಚೆಗೆ ತನ್ನ ಅಸ್ತಿತ್ವಕ್ಕೆ ಕಳೆದುಕೊಳ್ಳುತ್ತಿದೆ. ಜನ ಮತ್ತು ಆಡಳಿತಗಳ ನಿರ್ಲಕ್ಷ್ಯದಿಂದ ಕೆರೆ ಕಸದ ತೊಟ್ಟಿಯಾಗುತ್ತಿದೆ.</p>.<p>ಕೆರೆ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ತಾಲ್ಲೂಕಿನಲ್ಲೇ ದೊಡ್ಡ ಕೆರೆ ಇದಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಈ ಕೆರೆ ಸೇರುತ್ತದೆ. ಕೆರೆಗೆ ಸಮೀಪದಲ್ಲಿರುವ ಚೊಕ್ಕಹಳ್ಳಿ ಕೈಗಾರಿಕೆ ಪ್ರದೇಶ, ಮಳಿಗೆಗಳ ಗೋದಾಮಿನ ತ್ಯಾಜ್ಯವನ್ನು ರಾತ್ರಿ ವೇಳೆ ಸುರಿಯಲಾಗುತ್ತಿದೆ ಎಂದ ಆರೋಪವಿದೆ. ಗ್ರಾಮ ಪಂಚಾಯಿತಿ ವ್ಯಾಪಿಯ ತ್ಯಾಜ್ಯವನ್ನು ಇಲ್ಲೇ ವಿಲೇವಾರಿ ಮಾಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.</p>.<p>ಕೆರೆ ಅಂಗಳದಲ್ಲಿ ಸುರಿದಿರುವ ಕೈಗಾರಿಕಾ ತ್ಯಾಜ್ಯ ಕೊಳೆತು ಕೆರೆ ಒಡಲು ಸೇರುತ್ತಿದೆ. ಇದರಿಂದ ಭೂಮಿ ಮತ್ತು ಅಂತರ್ಜಲ ವಿಷವಾಗುತ್ತಿದೆ. ಮುಂದಿನ ದಿನದಲ್ಲಿ ಕೆರೆ ಎತ್ತಿನ ಹೊಳೆ ನೀರು ಹರಿದರೆ ಊರಿನ ಅಂತರ್ಜಲವೇ ವಿಷವಾಗುತ್ತದೆ ಎನ್ನುವ ಆತಂಕ ಗ್ರಾಮಸ್ಥರದಲ್ಲಿ ಮನೆ ಮಾಡಿದೆ.</p>.<p>ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿದೆ. ಗ್ರಾಮ ಪಂಚಾಯಿತಿ ಕಚೇರಿಯ ಕೂಗಳತೆ ದೂರದಲ್ಲಿ ಕೆರೆ ಇದೆ. ಆದರೆ ಪಂಚಾಯಿತಿ ಕೆರೆಯಲ್ಲಿ ಕಸ ಸುರಿಯುತ್ತಿದ್ದರೂ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸುಮ್ಮನೆ ಕುಳಿತಿದೆ.</p>.<p><strong>ಎತ್ತಿನ ಹೊಳೆ ನೀರು:</strong> ಕೆರೆಗೆ ಎತ್ತಿನ ಹೊಳೆ ನೀರು ಹರಿಸಲು ಕೆರೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಇದಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ₹3 ಕೋಟಿ ಹಣ ವ್ಯಯಿಸಲಾಗಿದೆ. ಅದರಂತೆ ಕೆರೆಯ ಕಟ್ಟೆಗೆ ಕಲ್ಲು ಕಟ್ಟಡ, ತೂಬು, ಕೆರೆಯ ಇಳಿಜಾರಿಗೆ ಹುಲ್ಲುಹಾಸು ಹಾಕಲಾಗಿದೆ. ಶಿಥಿಲಗೊಂಡಿದ್ದ ಕೆರೆಯ ಎರಡೂ ಭಾಗದ ಕೋಡಿಗಳನ್ನು ದುರಸ್ತಿ ಮಾಡಿ, ಕೆರೆಯ ಪೋಷಕ ಕಾಲುವೆ ಅಭಿವೃದ್ಧಿಪಡಿಸಲಾಗಿದೆ. ಕೆರೆಗೆ ಒಂದು ರೂಪ ನೀಡಲಾಗಿದೆ. ಆದರೆ ಇಲ್ಲಿ ಸುರಿಯುತ್ತಿರುವ ಕಸ ಕೆರೆ ಅಂದಕ್ಕೆ ಕಪ್ಪು ಚುಕ್ಕೆಯಾಗಿದೆ.</p>.<div><blockquote>ಕೆರೆಯಲ್ಲಿ ಕಸ ಸುರಿಯುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಕೈಗೊಳ್ಳಲಾಗುವುದು</blockquote><span class="attribution">ಮಂಜುನಾಥರೆಡ್ಡಿ ಎಇಇ ಸಣ್ಣ ನೀರಾವರಿ ಇಲಾಖೆ</span></div>.<div><blockquote>ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆ ಅಂಗಳ ಮತ್ತು ಸುತ್ತಮುತ್ತ ಕಸ ಸುರಿಯದಂತೆ ಎಚ್ಚರಿಕೆವಹಿಸಬೇಕು. ಕೆರೆ ಪೋಷಕ ಕಾಲುವೆ ದುರಸ್ತಿಗೊಳಿಸಬೇಕು</blockquote><span class="attribution">ದೊಡ್ಡಹುಲ್ಲೂರು ರುಕ್ಕೋಜಿ ಸಾಹಿತಿ</span></div>.<div><blockquote>ಸಾವಿರ ವರ್ಷಗಳ ಇತಿಹಾಸವಿರುವ ದೊಡ್ಡಹುಲ್ಲೂರಿನ ಕೆರೆಯನ್ನು ನಾವೆಲ್ಲರೂ ಉಳಿಸಬೇಕಿದೆ. ಕೆರೆಗೆ ಸುರಿಯುತ್ತಿರುವ ತ್ಯಾಜ್ಯವನ್ನು ಈ ಕೂಡಲೆ ನಿಲ್ಲಿಸುವಂತೆ ಕ್ರಮ ಕೈಗೊಳ್ಳಲಿ.</blockquote><span class="attribution">ಡಿ.ಎನ್.ಸುದರ್ಶನ್ರೆಡ್ಡಿ ಇತಿಹಾಸಕಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>