ಆಧುನಿಕ ಕೃಷಿ ವಿಧಾನಗಳ ಕುರಿತು ಮಾತನಾಡಿದ ಕೃಷಿ ವಿಜ್ಞಾನಿ ಡಾ. ಕಾವ್ಯ ಅವರು, ‘ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭಗಳಿಸಲು ಸಾಧ್ಯ. ಆಧುನಿಕ ಕೃಷಿಯಿಂದಾಗಿ ಉತ್ತಮ ಫಸಲು, ಇಳುವರಿ ಪಡೆಯಲು ಸಾಧ್ಯ. ಬಿತ್ತನೆ ಸಂದರ್ಭದಿಂದಲೂ ರೈತರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಭತ್ತ, ಜೋಳ, ರಾಗಿ, ಕಡಲೆ, ಶೇಂಗಾ ಬೀಜಗಳಿಗೆ ಬೀಜೋಪಚಾರ ಮಾಡಬೇಕು’ ಎಂದರು.