ಹೃದಯ ನಾರಾಯಣ್ ಸಿಂಗ್ ಇಬ್ಬರು ಸ್ನೇಹಿತರೊಂದಿಗೆ ಸೋಮವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಒಂಟಿ ಆನೆಯೊಂದು ರಸ್ತೆಯಲ್ಲಿ ಎದುರು ಬಂದಿದ್ದು ನೋಡುತ್ತಿದ್ದಂತೆಯೇ ಮೂರು ಮಂದಿ ಓಡಲು ಯತ್ನಿಸಿದರು. ಆದರೆ ಹೃದಯ ನಾರಾಯಣ್ ಸಿಂಗ್ ಅವರು ಆನೆ ದಾಳಿಗೆ ಸಿಲುಕಿದ್ದಾರೆ. ಆನೆಯು ಮುಖ, ತಲೆಯ ಭಾಗವನ್ನು ತುಳಿದು ಹಾಕಿದೆ. ಇದರಿಂದಾಗಿ ಹೃದಯ ನಾರಾಯಣ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.