ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ವರ ಒಳಿತನ್ನು ಬಯಸುವುದೇ ಧರ್ಮದ ಸಾರ’

Last Updated 6 ಜೂನ್ 2019, 13:18 IST
ಅಕ್ಷರ ಗಾತ್ರ

ವಿಜಯಪುರ: ‘ನಾನು, ನನ್ನದು ಎನ್ನುವುದು ಸರಿಯಲ್ಲ. ಎಲ್ಲವನ್ನು ಇಲ್ಲಿಯೇ ಸಂಪಾದನೆ ಮಾಡಿದ್ದೇವೆ. ಹೋಗುವಾಗ ಇಲ್ಲೇ ಬಿಟ್ಟು ಹೋಗುತ್ತೇವೆ. ಸಮಾಜದ ಶ್ರೇಯಸ್ಸಿಗಾಗಿ ಮಾಡುವ ಒಳ್ಳೆಯ ಕೆಲಸಗಳಷ್ಟೆ ಶಾಶ್ವತವಾಗಿ ಉಳಿಯುತ್ತವೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಜಿಲ್ಲಾ ವಕ್ಫ್ ಬೋರ್ಡ್ ನಿರ್ದೇಶಕ ಎಸ್.ರಿಯಾಜ್ ಅವರ ಮನೆಯಲ್ಲಿ ರಂಜಾನ್ ಅಂಗವಾಗಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಜಾತಿ, ಮತ, ಧರ್ಮಗಳನ್ನು ಬಿಡಬೇಕು. ಮಾನವೀಯತೆ ಬೆಳೆಸಿಕೊಳ್ಳಬೇಕು. ಭಾರತ ಸರ್ವ ಧರ್ಮಗಳ ತವರೂರು. ಮಾತ್ರವಲ್ಲ ಐಕ್ಯತೆಗೆ ಹೆಸರುವಾಸಿ. ಪರಸ್ಪರ ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಬೇಕು. ಇರುವುದುಗಂಡು, ಹೆಣ್ಣು ಎರಡೇ ಜಾತಿಗಳು. ಎಲ್ಲರೂ ಪರಸ್ಪರ ಸಹಕಾರದಿಂದ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಹಬ್ಬ, ಆಚರಣೆಗಳು ಜನರಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶ ಹೊಂದಿವೆ. ಎಲ್ಲ ಧರ್ಮ ಆಚರಣೆಗಳಲ್ಲಿ ಸರ್ವರೂ ಭಾಗವಹಿಸಿ ಶುಭಕೋರುವ ಮೂಲಕ ನಾವೆಲ್ಲ ಒಂದೇ ಎನ್ನುವ ಸಂದೇಶ ಸಾರಬೇಕು’ ಎಂದರು.

ಜೆಡಿಎಸ್ ನಗರ ಘಟಕ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ ‘ಎಲ್ಲ ಧರ್ಮಗಳ ಸಾರ ಮಾನವೀಯತೆ. ಪರಸ್ಪರ ಹೊಂದಾಣಿಕೆಯಿಂದ ಜೀವನ ಮಾಡುವುದನ್ನು ಬೋಧಿಸುತ್ತವೆ. ಜಾತಿ, ಧರ್ಮಗಳ ತಾರತಮ್ಯ ಹೋಗಲಾಡಿಸುವ ಮೂಲಕ ಸಾಮರಸ್ಯ ಕಾಪಾಡಬೇಕು. ಪ್ರಾರ್ಥನೆಗೆ ಭಾಷೆ, ಧರ್ಮ ಮುಂತಾದವುಗಳು ಅಡ್ಡಿಯಾಗುವುದಿಲ್ಲ. ಎಲ್ಲರ ಒಳಿತನ್ನು ಬಯಸಬೇಕು’ ಎಂದರು.

ಮುಖಂಡರಾದ ಬಿಜ್ಜವಾರ ಆನಂದ್, ಎಚ್.ಎಂ.ಕೃಷ್ಣಪ್ಪ, ಸಾಧತ್, ನಾರಾಯಣಸ್ವಾಮಿ, ಭುಜೇಂದ್ರ, ಹರ್ಷವರ್ಧನ್, ಹರೀಶ್, ಕಿರಣ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT