ದೇವನಹಳ್ಳಿ: ಇಲ್ಲಿನ ಅಬಕಾರಿ ದಾಸ್ತಾನು ಮಳಿಗೆ ಆವರಣದಲ್ಲಿ ಅವಧಿ ಮಿರಿದ ₹ 10 ಲಕ್ಷ ಮೌಲ್ಯದ ಮದ್ಯವನ್ನು ಚರಂಡಿಗೆ ಸುರಿಯಲಾಯಿತು.
ದಾಸ್ತಾನು ಮಳಿಗೆ ವ್ಯವಸ್ಥಾಪಕ ಸುಬ್ರಮಣಿ ಮಾತನಾಡಿ, ಸೇವನೆಗೆ ಅರ್ಹವಲ್ಲದ ಮದ್ಯ ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಶಿಕ್ಷಾರ್ಹ ಅಪರಾಧ ಎಂದು ಹೇಳಿದರು.
ಪ್ರಸ್ತುತ ದಾಸ್ತಾನು ಮಳಿಗೆಯಲ್ಲಿ ಅವಧಿ ಮೀರಿದ ವಿವಿಧ ಬ್ರಾಂಡ್ ಮಾದರಿಯ ಐ.ಎಂ.ಎಲ್ 48 ಕೇಸ್, 532 ಬಾಟಲ್ ಮದ್ಯ ಸಂಪೂರ್ಣ ಸುರಿಯಲಾಗುತ್ತಿದೆ ಎಂದು ಹೇಳಿದರು. ಅಬಕಾರಿ ನಿರೀಕ್ಷಕಿ ಎಂ.ಎಸ್. ಪಾಟೀಲ್, ಇನ್ಸ್ಪೆಕ್ಟರ್ ಹರಿದಾಸ್ ನಾಯ್ಕ ಇದ್ದರು.