ಹೊಸಳ್ಳಿ ನಾರಾಯಣಸ್ವಾಮಿ ಮಾತನಾಡಿ, ‘ನಮ್ಮ ಭೂಮಿಯ ಉಳಿವಿಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ರೈತರ ಜೊತೆ ಸಂಘರ್ಷ ಮಾಡುವುದನ್ನು ಬಿಟ್ಟು ಭೂಮಿಯನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದರು. ರೈತ ಹೋರಾಟಗಾರ ಸಿ.ಬಿ. ಮೋಹನ್, ನಂದನ್, ಮುನಿರಾಜು, ಮರಿಯಪ್ಪ, ಗಂಗಪ್ಪ ಮುನಿಕೃಷ್ಣಪ್ಪ, ನಂಜೇಗೌಡ ಕರಿಗಪ್ಪ ಶ್ರೀನಿವಾಸ್ ಇದ್ದರು.