ರೈತ ವೆಂಕಟಸ್ವಾಮಪ್ಪ ಮಾತನಾಡಿ ‘ಈ ಬಾರಿ ಮೇವಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇಂತಹ ಪರಿಸ್ಥಿತಿ ಇದೇ ಮೊದಲು. ಒಂದು ಟ್ರ್ಯಾಕ್ಟರ್ ರಾಗಿ ಹುಲ್ಲಿಗೆ ₹ 30 ಸಾವಿರ ಹೇಳುತ್ತಾರೆ. ಕುರಿಗಳನ್ನು ಮಾರಿ, ಒಡವೆಗಳನ್ನು ಗಿರವಿ ಇಟ್ಟು ಮೇವು ಖರೀದಿ ಮಾಡಿದ್ದೇವೆ. ಈ ಬಾರಿಯೂ ಮಳೆ ಬಾರದಿದ್ದರೆ ದನಕರುಗಳನ್ನು ಮಾರಾಟ ಮಾಡಿ, ಕೆಲಸಕ್ಕಾಗಿ ದೇಶಾಂತರ ಹೋಗಬೇಕಾಗುತ್ತದೆ’ ಎಂದು ನೋವು ಹಂಚಿಕೊಂಡರು.