ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೀಪಗಳನ್ನು ಬೆಳಗುತ್ತಿದ್ದರಿಂದ ಪೊಲೀಸರು ಬಂದು ವಾಪಸ್ ಕಳುಹಿಸಿದರು. ಗಂಗಾತಾಯಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೃಷ್ಣಪ್ಪ ಮಾತನಾಡಿ, ‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಯಾರೋ ಕಿಡಿಗೇಡಿಗಳು ದೇವಾಲಯದಲ್ಲಿ ಜಾತ್ರೆ ಪ್ರಯುಕ್ತ ಪೂಜೆಗಳು ಪ್ರಾರಂಭವಾಗಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಕೊರೊನಾ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಸರ್ಕಾರದ ಸೂಚನೆಯಂತೆ ಊರ ಜಾತ್ರೆಯನ್ನು ಸಹ ರದ್ದುಗೊಳಿಸಿದ್ದೇವೆ. ಭಕ್ತರು ತಮ್ಮ ಮನೆಯಲ್ಲಿಯೇ ದೇವರ ಭಾವಚಿತ್ರವಿಟ್ಟುಕೊಂಡು ಪೂಜೆ ಸಲ್ಲಿಸುವ ಮೂಲಕ ದೀಪಗಳು ಬೆಳಗಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.