ಈ ಕುರಿತು ಸೋಮವಾರ ರೈತರ ಸಮ್ಮುಖದಲ್ಲಿ ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಜೊತೆ ಮಾತುಕತೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ನಾನು ಶಾಸಕನಾಗಿದ್ದಾಗ ಕೃಷಿ ಭೂಮಿ ಪಡೆಯಲು ಫಾರಂ ನಂಬರ್ 56 ಪತ್ರಕ್ಕೆ ಅರ್ಜಿ ಹಾಕಿದ ತಾಲೂಕಿನ ಬಹುತೇಕ ರೈತರಿಗೆ ಶಿಫಾರಸು ಮಾಡಿದ್ದೇನೆ. ಈ ಶಿಫಾರಸು ಆಧರಿಸಿ ಕೃಷಿ ಭೂಮಿಗೆ ಹಕ್ಕುಪತ್ರ ನೀಡದೇ ಆ ಭೂಮಿಯನ್ನು ಸಾಮಾಜಿಕ ವಲಯ ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸಿ ಅದನ್ನು ರೈತರಿಂದ ಬಲವಂತವಾಗಿ ವಶಪಡಿಸಿಕೊಳ್ಳಲು ಹೊರಟಿರುವುದು ಖಂಡನೀಯ. ಒಂದು ವೇಳೆ ರೈತರನ್ನು ಈ ರೀತಿ ಒಕ್ಕಲೆಬ್ಬಿಸುವ ಕೆಲಸ ಮಾಡಿದರೆ, ಈ ನಿಯಮವನ್ನು ಇಡೀ ಜಿಲ್ಲೆಗೆ ಅನುಸರಿಸಬೇಕು. ಕೇವಲ ಗಂಗೋನಹಳ್ಳಿ ರೈತರಿಗೆ ಮಾತ್ರ ಈ ಕ್ರಮ ಏಕೆ ಎಂದು ಅವರು ಪ್ರಶ್ನಿಸಿದರು.