ಆನೇಕಲ್: ವಾರದ ಹಿಂದೆ ಯುವಪ್ರೇಮಿಗಳಿಬ್ಬರು ಪರಾರಿಯಾದ ಘಟನೆಯಿಂದ ರೊಚ್ಚಿಗೆದ್ದ ಗುಂಪೊಂದು ಬುಧವಾರ ಪ್ರಿಯಕರನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ.
ಪ್ರೀತಿಸುತ್ತಿದ್ದ ಗೋಣಿಘಟ್ಟಪುರದ ಯುವಕ ಮತ್ತು ಮಾರತ್ಹಳ್ಳಿಯ ಯುವತಿಯ ಮದುವೆಗೆ ಕುಟುಂಬದವರ ಒಪ್ಪಿಗೆ ಇರಲಿಲ್ಲ. ಇದರಿಂದ ಹತಾಶರಾದ ಪ್ರೇಮಿಗಳು ವಾರದ ಹಿಂದೆ ಮನೆಬಿಟ್ಟು ಹೋಗಿದ್ದರು.
ಪ್ರೇಮಿಗಳು ಮದುವೆಯಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇಯುವಕನ ಕುಟುಂಬದ ಸದಸ್ಯರು ಕೂಡ ಮನೆಬಿಟ್ಟು ತೆರಳಿದ್ದರು. ಈ ವೇಳೆ ಗುಂಪುವೊಂದು ತಾಲ್ಲೂಕಿನ ಗೋಣಿಘಟ್ಟಪುರದಲ್ಲಿರುವಯುವಕನ ಮನೆಗೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.