<p><strong>ಕನಕಪುರ:</strong> ನಗರದ ಸಂಗಮ ರಸ್ತೆಯಲ್ಲಿರುವ ಶ್ರೀ ಧರ್ಮರಾಯ ಮತ್ತು ಶ್ರೀ ದ್ರೌಪತಮ್ಮ ದೇವಿಯ 22ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ದೇವಾಲಯದ ಆವರಣದಲ್ಲಿ ನೆರವೇರಿಸಲಾಯಿತು.</p>.<p>ಕರಗ ಮಹೋತ್ಸವದ ಶಕ್ತ್ಯೋತ್ಸವದ ಧ್ವಜಾರೋಹಣ ನೆರವೇರಿಸುವುದಕ್ಕೂ ಮುನ್ನ ದೇವಾಲಯದಲ್ಲಿ ಹೋಮ ಹವನವನ್ನು ದೇವಾಲಯದಲ್ಲಿ ನೆರವೇರಿಸಿದರು.</p>.<p>ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿ ಸೇರಿದಂತೆ ಭೀಮ, ಅರ್ಜುನ, ನಕುಲ, ಸಹದೇವ ದೇವರ ಉತ್ಸವ ಮೂರ್ತಿಗಳನ್ನು ನಗರದಲ್ಲಿ ಮೆರವಣಿಗೆ ಮಾಡಲಾಯಿತು.</p>.<p>ಕೆ.ಆರ್. ವೆಂಕಟರಮಣಸ್ವಾಮಿ ಮತ್ತು ಕುಟುಂಬ, ಕೆ.ಜಿ.ದೇವರಾಜು ಮತ್ತು ಕುಟುಂಬ, ಟಿ.ರಾಮಚಂದ್ರ ಮತ್ತು ಕುಟುಂಬ, ವೆಂಕಟೇಶ್ ಮತ್ತು ಕುಟುಂಬದವರು ಪೂಜಾ ಕಾರ್ಯ ನೆರವೇರಿಸಿಕೊಟ್ಟರು.</p>.<p>ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ಕೆ.ಪಿ. ಪೆರುಮಾಳಯ್ಯ, ಟೌನ್ ಅಧ್ಯಕ್ಷ ಕೆ.ಪಿ. ಆನಂದಯ್ಯ, ಉಪಾಧ್ಯಕ್ಷರಾದ ವೆಂಕಟರಮಣಸ್ವಾಮಿ, ಡಿ.ವೆಂಕಟರಮಣಸ್ವಾಮಿ, ಶ್ರೀನಿವಾಸ, ಕಾರ್ಯದರ್ಶಿಗಳಾದ ಟ.ರಾಮಚಂದ್ರ, ಶಾಂತ, ಜಯರಾಮು ಉಪಸ್ಥಿತರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ನಗರದ ಸಂಗಮ ರಸ್ತೆಯಲ್ಲಿರುವ ಶ್ರೀ ಧರ್ಮರಾಯ ಮತ್ತು ಶ್ರೀ ದ್ರೌಪತಮ್ಮ ದೇವಿಯ 22ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ದೇವಾಲಯದ ಆವರಣದಲ್ಲಿ ನೆರವೇರಿಸಲಾಯಿತು.</p>.<p>ಕರಗ ಮಹೋತ್ಸವದ ಶಕ್ತ್ಯೋತ್ಸವದ ಧ್ವಜಾರೋಹಣ ನೆರವೇರಿಸುವುದಕ್ಕೂ ಮುನ್ನ ದೇವಾಲಯದಲ್ಲಿ ಹೋಮ ಹವನವನ್ನು ದೇವಾಲಯದಲ್ಲಿ ನೆರವೇರಿಸಿದರು.</p>.<p>ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿ ಸೇರಿದಂತೆ ಭೀಮ, ಅರ್ಜುನ, ನಕುಲ, ಸಹದೇವ ದೇವರ ಉತ್ಸವ ಮೂರ್ತಿಗಳನ್ನು ನಗರದಲ್ಲಿ ಮೆರವಣಿಗೆ ಮಾಡಲಾಯಿತು.</p>.<p>ಕೆ.ಆರ್. ವೆಂಕಟರಮಣಸ್ವಾಮಿ ಮತ್ತು ಕುಟುಂಬ, ಕೆ.ಜಿ.ದೇವರಾಜು ಮತ್ತು ಕುಟುಂಬ, ಟಿ.ರಾಮಚಂದ್ರ ಮತ್ತು ಕುಟುಂಬ, ವೆಂಕಟೇಶ್ ಮತ್ತು ಕುಟುಂಬದವರು ಪೂಜಾ ಕಾರ್ಯ ನೆರವೇರಿಸಿಕೊಟ್ಟರು.</p>.<p>ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ಕೆ.ಪಿ. ಪೆರುಮಾಳಯ್ಯ, ಟೌನ್ ಅಧ್ಯಕ್ಷ ಕೆ.ಪಿ. ಆನಂದಯ್ಯ, ಉಪಾಧ್ಯಕ್ಷರಾದ ವೆಂಕಟರಮಣಸ್ವಾಮಿ, ಡಿ.ವೆಂಕಟರಮಣಸ್ವಾಮಿ, ಶ್ರೀನಿವಾಸ, ಕಾರ್ಯದರ್ಶಿಗಳಾದ ಟ.ರಾಮಚಂದ್ರ, ಶಾಂತ, ಜಯರಾಮು ಉಪಸ್ಥಿತರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>