'ಕಾರ್ಯಕ್ರಮ, ಮೆರವಣಿಗೆಯಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ 1 ಗಂಟೆ ಮುಂಚಿತವಾಗಿ ಸಭೆ ನಡೆಯುವ ಸ್ಥಳದಲ್ಲಿ ಹಾಜರಿದ್ದು ಕ್ಯಾಮೆರಾದಲ್ಲಿ ನಿಮ್ಮ ಪರಿಚಯ ಹೇಳಿಕೊಂಡು ಅಲ್ಲಿ ಎಷ್ಟು ಟೇಬಲ್ ಎಷ್ಟು ಕುರ್ಚಿ ಇದೆ. ಎಲ್ಲಾ ವಿವರಗಳನ್ನು ನೀಡುವ ಮೂಲಕ ಚಿತ್ರೀಕರಿಸಬೇಕು' ಎಂದರು.'ಅಭ್ಯರ್ಥಿಗಳ ಚುನಾವಣಾ ವೆಚ್ಚ ₹ 28 ಲಕ್ಷ ಮೀರಬಾರದು. ಬೈಕ್ ರ್ಯಾಲಿಯಲ್ಲಿ 10 ವಾಹನಗಳಿಗಿಂತ ಹೆಚ್ಚಿನ ವಾಹನ ಇದ್ದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಒಬ್ಬ ಅಭ್ಯರ್ಥಿಗೆ 3 ವಾಹನಗಳನ್ನು ಮಾತ್ರ ಪ್ರಚಾರಕ್ಕಾಗಿ ಬಳಸಬಹುದು. ಕೆಡಿಪಿ ಸಭೆಗಳನ್ನು ನಡೆಸುವಂತಿಲ್ಲ. ಪ್ರಚಾರ ವೇಳೆಯಲ್ಲಿ ಹಣ, ಉಡುಗೊರೆ, ಹಂಚಿಕೆ ಕಂಡುಬಂದರೆ ಪ್ಲೈಯಿಂಗ್ ಸ್ಕ್ವಾಡ್ ಹಾಗೂ ವಿಡಿಯೊಗ್ರಫಿ ಟೀಮ್ಗೆ ತಿಳಿಸಬೇಕು' ಎಂದು ಹೇಳಿದರು.'ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಯಾವುದೇ ಹೊಸ ಕಾಮಗಾರಿ ಆರಂಭಿಸುವಂತಿಲ್ಲ’ ಎಂದರು.ಸಹಾಯಕ ಚುನಾವಣಾಧಿಕಾರಿ ಗುರುಬಸವರಾಜ, ನಗರಠಾಣೆಯ ಪಿಐ ರವಿ ಉಕ್ಕುಂದ, ಗ್ರಾಮೀಣ ಠಾಣೆಯ ಪಿಎಸ್ಐ ಭೀಮಣ್ಣ ಸೂರೆ ಇದ್ದರು.