‘ಇಲ್ಲಿನ ಪದ್ಮಾವತಿ ಗೋಶಾಲೆಯಲ್ಲಿನ 206 ರಾಸುಗಳಿಗೆ 3 ಲೋಡು ಜೋಳದ ಕಡ್ಡಿಗಳ ಮೇವು ಇಲ್ಲಿಗೆ ತಂದಿದ್ದೇವೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಂದಾಯ ಇಲಾಖೆ, ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ತೀವ್ರ ಮಳೆಯ ಕೊರತೆಯಿಂದ ಮೇವಿಲ್ಲದೆ ಪರದಾಡುತ್ತಿರುವ ರಾಸುಗಳಿಗೆ ಬಳ್ಳಾರಿ ಮತ್ತು ಆಂಧ್ರಪ್ರದೇಶದಿಂದ ಮೇವು ತರಿಸಿದ್ದೇವೆ. ಜಾನುವಾರುಗಳಿಗೆ ಪೌಷ್ಟಿಕ ಆಹಾರವನ್ನು ವಿತರಣೆ ಮಾಡುತ್ತಿದ್ದೇವೆ. ಮೇವು ನಿಧಿಯಲ್ಲಿ ಒಣಹುಲ್ಲು ಮಂಡಿಬೆಲೆ, ಆಲೂರು ದುದ್ದನಹಳ್ಳಿಗೆ ಬೇಡಿಕೆಗೆ ಅನುಗುಣವಾಗಿ ಕಳುಹಿಸಿಕೊಡಲಾಗಿದೆ’ ಎಂದು ಅವರು ಹೇಳಿದರು.