ತೋಟದ ಸುತ್ತಲು ಮರಗಳನ್ನು ಬೆಳೆಸಿದರೆ ಬೆಳೆಗೆ ತೊಂದರೆ ಎನ್ನುವ ತಪ್ಪು ಮನೋಭಾವನೆ ಇದೆ. ಆದರೆ ಇದು ಹೊಲದಲ್ಲಿ ಬೆಳೆಯುವ ಬೆಳೆಗಳಿಗೆ ಸಹಕಾರಿಯಾಗಲಿದೆ. ನೀಲಗಿರಿ ಮರಗಳನ್ನು ಬೆಳೆಸಿ ಮಣ್ಣು, ಭೂಮಿ, ಅಂತರ್ಜಲ ಎಲ್ಲವನ್ನು ಹಾಳು ಮಾಡುವ ಬದಲು ಅರಣ್ಯ ಆಧಾರಿತ ಕೃಷಿಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದರಿಂದ ರೈತರ ಭೂಮಿ, ಅಂತರ್ಜಲ ವೃದ್ಧಿ, ಪಕ್ಷಿ ಸಂಕುಲಗಳ ಉಳಿವಿಗು ಸಹಕಾರಿಯಾಗಲಿದೆ. ಹೆಬ್ಬೇವು, ಮಹಾಗನಿ ಸೇರಿದಂತೆ ಹಲವಾರು ರೀತಿಯ ಸಸಿಗಳನ್ನು ಬೆಳೆಸುವುದರಿಂದ ಆರ್ಥಿಕವಾಗಿಯು ಲಾಭವಾಗಲಿದೆ ಎಂದರು.