<p><strong>ವಿಜಯಪುರ (ದೇವನಹಳ್ಳಿ):</strong> ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯ ಬಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ, ಸೀಟಾ ಮತ್ತು ಶಿಶು ಮಂದಿರ ಸಹಯೋಗದಲ್ಲಿ ನಾರಿಡ್ರೈವ್-ಇ ಮಹಿಳಾ ಎಲೆಕ್ಟ್ರಿಕ್ ಚಾಲನಾ ಕಾರ್ಯಕ್ರಮದಡಿ ಎಂಟು ಮಂದಿ ಮಹಿಳೆಯರಿಗೆ ಉಚಿತವಾಗಿ ಎಲೆಕ್ಟ್ರಿಕ್ ಆಟೋಗಳನ್ನು ಹಸ್ತಾಂತರ ಮಾಡಲಾಯಿತು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಮುಖ್ಯಸ್ಥೆ ನಳಿನಿ ಜಾರ್ಜ್, ಪ್ರತಿಯೊಬ್ಬ ಮಹಿಳೆ ತನಗೆ ಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡೆದು ಎಲ್ಲಾ ರಂಗಗಳಲ್ಲೂ ಸಾಧಕಿಯಾಗಬೇಕು. ಮಹಿಳೆಯರು ಪುರುಷರಿಗೆ ಸಮಾನವಾಗಿ ದುಡಿಯುವಂತಹ ಅವಕಾಶಗಳಿವೆ. ಆಟೊ ಚಾಲನೆಯನ್ನು ಕಲಿತು ಅದರಿಂದ ಕುಟುಂಬ ನಿರ್ವಹಣೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಭಿ ಜೀವನ ನಡೆಸಬೇಕು ಎಂದರು.</p>.<p>ಪುರಸಭೆ ಸದಸ್ಯೆ ಶಿಲ್ಪಾಅಜಿತ್, ಮಹಿಳೆಯರು ಉಚಿತವಾಗಿ ಸಿಕ್ಕಿರುವ ಆಟೊಗಳ ಮೂಲಕ ದುಡಿಮೆ ಮಾಡಿ, ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ಇತರರನ್ನು ಸ್ವಾವಲಂಬಿಗಳನ್ನಾಗಿ ಮಾಡುವಂತಹ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.</p>.<p>ಶಿಶು ಮಂದಿರದ ಮುಖ್ಯಸ್ಥ ಆನಂದ್, ಪ್ರಸ್ತುತ ಎಂಟು ಎಲೆಕ್ಟ್ರಿಕ್ ಆಟೊಗಳನ್ನು ವಿತರಣೆ ಮಾಡಲಾಗುತ್ತಿದೆ. ಇದು 80ಕ್ಕೆ ಏರಿಕೆಯಾಗಬೇಕು. ಮಹಿಳೆಯರು ಕಡಿಮೆ ಸಮಯದಲ್ಲಿ ತರಬೇತಿ ಹೊಂದಿ ಹೆಚ್ಚು ಆದಾಯ ಗಳಿಸಿಕೊಳ್ಳುವಂತಹ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.</p>.<p>ಆಟೊಗಳನ್ನು ಯಾವುದೇ ಕಾರಣಕ್ಕೂ ಪುರುಷರು ಚಾಲನೆ ಮಾಡಬಾರದು, ಯಾರಿಗೂ ಮಾರಾಟ ಮಾಡುವಂತಿಲ್ಲ. ಅಡಮಾನ ಇಡುವಂತಿಲ್ಲ. ಮೂಲ ದಾಖಲೆಗಳನ್ನು ನಮ್ಮಲ್ಲೆ ಉಳಿಸಿಕೊಂಡಿರುತ್ತೇವೆ. ಆಟೋ ದುರುಪಯೋಗವಾಗಿರುವುದು ಕಂಡು ಬಂದರೆ ವಾಪಸ್ಸು ಪಡೆದುಕೊಳ್ಳಲಾಗುತ್ತದೆ ಎಂದು ಹೇಳಿದರು.</p>.<p>ಮಹಿಳೆಯರು ಸ್ವಾವಲಂಭಿ ಜೀವನ ಸಾಗಿಸಲು ಮಹಿಳೆಯರಿಗೆ ಉಚಿತವಾಗಿ ಆಟೋಗಳನ್ನು ವಿತರಿಸಿದ್ದು, ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಸಂಸ್ಥೆಯ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಫಲಾನುಭವಿ ಲಕ್ಷ್ಮೀದೇವಿ ತಿಳಿಸಿದರು.</p>.<p>ಪಟ್ಟಣದ ನಿವಾಸಿಗಳಾದ ಸೌಮ್ಯ, ರಾಧಾ, ಮಂಜುಳಾ, ಲಕ್ಷ್ಮೀದೇವಿ, ಆಶಾ, ಶುಭಂಗಿ, ಮೋನಿಕಾ ಮತ್ತು ಫರಿದುನ್ನಿಸ್ 8 ಮಂದಿ ಮಹಿಳೆಯರು ಯೋಜನೆಯ ಲಾಭ ಪಡೆದಿದ್ದು, ಈ ಎಂಟು ಮಂದಿ ಮಹಿಳೆಯರಿಗೆ ಕಳೆದ ಒಂದು ತಿಂಗಳಿನಿಂದ ಉಚಿತವಾಗಿ ಆಟೊ ಚಾಲನಾ ತರಬೇತಿಯನ್ನು ನೀಡಿ, ಸಜ್ಜುಗೊಳಿಸಿದ ನಂತರವೇ ವಾಹನಗಳನ್ನು ಹಸ್ತಾಂತರಿಸಲಾಯಿತು.</p>.<p>ಶಿಶು ಮಂದಿರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಕಂಸಾಳೆ ನೃತ್ಯ ಎಲ್ಲರ ಗಮನ ಸೆಳೆಯಿತು. ವಿಜಯಪುರ ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ಬೈರೇಗೌಡ, ಸೌಮ್ಯನಿಂಗಪ್ಪ, ತರಬೇತುದಾರೆ ಮಂಜುಳಾ, ಅಜಿತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ):</strong> ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯ ಬಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ, ಸೀಟಾ ಮತ್ತು ಶಿಶು ಮಂದಿರ ಸಹಯೋಗದಲ್ಲಿ ನಾರಿಡ್ರೈವ್-ಇ ಮಹಿಳಾ ಎಲೆಕ್ಟ್ರಿಕ್ ಚಾಲನಾ ಕಾರ್ಯಕ್ರಮದಡಿ ಎಂಟು ಮಂದಿ ಮಹಿಳೆಯರಿಗೆ ಉಚಿತವಾಗಿ ಎಲೆಕ್ಟ್ರಿಕ್ ಆಟೋಗಳನ್ನು ಹಸ್ತಾಂತರ ಮಾಡಲಾಯಿತು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಮುಖ್ಯಸ್ಥೆ ನಳಿನಿ ಜಾರ್ಜ್, ಪ್ರತಿಯೊಬ್ಬ ಮಹಿಳೆ ತನಗೆ ಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡೆದು ಎಲ್ಲಾ ರಂಗಗಳಲ್ಲೂ ಸಾಧಕಿಯಾಗಬೇಕು. ಮಹಿಳೆಯರು ಪುರುಷರಿಗೆ ಸಮಾನವಾಗಿ ದುಡಿಯುವಂತಹ ಅವಕಾಶಗಳಿವೆ. ಆಟೊ ಚಾಲನೆಯನ್ನು ಕಲಿತು ಅದರಿಂದ ಕುಟುಂಬ ನಿರ್ವಹಣೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಭಿ ಜೀವನ ನಡೆಸಬೇಕು ಎಂದರು.</p>.<p>ಪುರಸಭೆ ಸದಸ್ಯೆ ಶಿಲ್ಪಾಅಜಿತ್, ಮಹಿಳೆಯರು ಉಚಿತವಾಗಿ ಸಿಕ್ಕಿರುವ ಆಟೊಗಳ ಮೂಲಕ ದುಡಿಮೆ ಮಾಡಿ, ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ಇತರರನ್ನು ಸ್ವಾವಲಂಬಿಗಳನ್ನಾಗಿ ಮಾಡುವಂತಹ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.</p>.<p>ಶಿಶು ಮಂದಿರದ ಮುಖ್ಯಸ್ಥ ಆನಂದ್, ಪ್ರಸ್ತುತ ಎಂಟು ಎಲೆಕ್ಟ್ರಿಕ್ ಆಟೊಗಳನ್ನು ವಿತರಣೆ ಮಾಡಲಾಗುತ್ತಿದೆ. ಇದು 80ಕ್ಕೆ ಏರಿಕೆಯಾಗಬೇಕು. ಮಹಿಳೆಯರು ಕಡಿಮೆ ಸಮಯದಲ್ಲಿ ತರಬೇತಿ ಹೊಂದಿ ಹೆಚ್ಚು ಆದಾಯ ಗಳಿಸಿಕೊಳ್ಳುವಂತಹ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.</p>.<p>ಆಟೊಗಳನ್ನು ಯಾವುದೇ ಕಾರಣಕ್ಕೂ ಪುರುಷರು ಚಾಲನೆ ಮಾಡಬಾರದು, ಯಾರಿಗೂ ಮಾರಾಟ ಮಾಡುವಂತಿಲ್ಲ. ಅಡಮಾನ ಇಡುವಂತಿಲ್ಲ. ಮೂಲ ದಾಖಲೆಗಳನ್ನು ನಮ್ಮಲ್ಲೆ ಉಳಿಸಿಕೊಂಡಿರುತ್ತೇವೆ. ಆಟೋ ದುರುಪಯೋಗವಾಗಿರುವುದು ಕಂಡು ಬಂದರೆ ವಾಪಸ್ಸು ಪಡೆದುಕೊಳ್ಳಲಾಗುತ್ತದೆ ಎಂದು ಹೇಳಿದರು.</p>.<p>ಮಹಿಳೆಯರು ಸ್ವಾವಲಂಭಿ ಜೀವನ ಸಾಗಿಸಲು ಮಹಿಳೆಯರಿಗೆ ಉಚಿತವಾಗಿ ಆಟೋಗಳನ್ನು ವಿತರಿಸಿದ್ದು, ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಸಂಸ್ಥೆಯ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಫಲಾನುಭವಿ ಲಕ್ಷ್ಮೀದೇವಿ ತಿಳಿಸಿದರು.</p>.<p>ಪಟ್ಟಣದ ನಿವಾಸಿಗಳಾದ ಸೌಮ್ಯ, ರಾಧಾ, ಮಂಜುಳಾ, ಲಕ್ಷ್ಮೀದೇವಿ, ಆಶಾ, ಶುಭಂಗಿ, ಮೋನಿಕಾ ಮತ್ತು ಫರಿದುನ್ನಿಸ್ 8 ಮಂದಿ ಮಹಿಳೆಯರು ಯೋಜನೆಯ ಲಾಭ ಪಡೆದಿದ್ದು, ಈ ಎಂಟು ಮಂದಿ ಮಹಿಳೆಯರಿಗೆ ಕಳೆದ ಒಂದು ತಿಂಗಳಿನಿಂದ ಉಚಿತವಾಗಿ ಆಟೊ ಚಾಲನಾ ತರಬೇತಿಯನ್ನು ನೀಡಿ, ಸಜ್ಜುಗೊಳಿಸಿದ ನಂತರವೇ ವಾಹನಗಳನ್ನು ಹಸ್ತಾಂತರಿಸಲಾಯಿತು.</p>.<p>ಶಿಶು ಮಂದಿರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಕಂಸಾಳೆ ನೃತ್ಯ ಎಲ್ಲರ ಗಮನ ಸೆಳೆಯಿತು. ವಿಜಯಪುರ ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ಬೈರೇಗೌಡ, ಸೌಮ್ಯನಿಂಗಪ್ಪ, ತರಬೇತುದಾರೆ ಮಂಜುಳಾ, ಅಜಿತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>